Advertisement

ಕಠಿಣ ಸರಣಿಗೆ ತಯಾರಿ: ಕೊಹ್ಲಿ ಬೆನ್ನಿಗೆ ನಿಂತ ಧೋನಿ

06:00 AM Nov 28, 2017 | Team Udayavani |

ರಾಂಚಿ: ಇತ್ತೀಚೆಗೆ ಒತ್ತಡದ ಸರಣಿ ಕುರಿತಂತೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆಯನ್ನು ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಬೆಂಬಲಿಸಿದ್ದಾರೆ. 

Advertisement

ಮಾಧ್ಯಮದೊಂದಿಗೆ ಮಾತನಾಡಿದ ಧೋನಿ, ಕೊಹ್ಲಿ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಸತತ ಸರಣಿಯಿಂದ ಆಟಗಾರರು ವಿಶ್ರಾಂತಿ ಇಲ್ಲದೆ ಬಳಲುತ್ತಿದ್ದಾರೆ. ಇದರಿಂದ ವಿದೇಶಿ ಸರಣಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟಗನಿಗೆ ಇದೊಂದು ದೊಡ್ಡ ಸವಾಲು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next