Advertisement

YSR ಕಾಂಗ್ರೆಸ್‌ ತೊರೆದ ಸಂಸದ ರಾಯುಲು; ಪಕ್ಷಕ್ಕೆ ಮತ್ತೆ ಪೆಟ್ಟು

12:20 AM Jan 24, 2024 | Team Udayavani |

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ಗೆ ಸಂಸದ ಲಾವು ಶ್ರೀಕೃಷ್ಣ ದೇವರಾಯಲು ವಿದಾಯ ಹೇಳಿದ್ದಾರೆ. ಜತೆಗೆ ನರಸರಾವ್‌ಪೇಟ್‌ ಕ್ಷೇತ್ರದ ಸಂಸತ್‌ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಅವರನ್ನು ಈ ಬಾರಿ ಗುಂಟೂರಿನಿಂದ ಸ್ಪರ್ಧಿಸುವಂತೆ ಸೂಚಿಸಿದ್ದೇ ಪಕ್ಷ ತೊರೆಯಲು ಕಾರಣ ಎನ್ನಲಾಗುತ್ತಿದೆ.

Advertisement

ಲೋಕಸಭೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮುನ್ನ ಮಾಜಿ ಸಂಸದ ಬಾಲಶೌರಿ ವಲ್ಲಭನೇನಿ ಹಾಗೂ ಸಂಸದ ಸಂಜೀವ್‌ ಕುಮಾರ್‌ ಅವರು ಪಕ್ಷ ತೊರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next