Advertisement

ಸಿಎಂ ಸ್ಥಾನದ ಬಗ್ಗೆ ಮಾತಾಡುವುವವರು ಅನಾಗರಿಕರು: ಸಂಸದ ಎ.ನಾರಾಯಣಸ್ವಾಮಿ

12:42 PM Jun 08, 2021 | Team Udayavani |

ಚಿತ್ರದುರ್ಗ: ಮುಖ್ಯಮಂತ್ರಿ ಕುರ್ಚಿ ಬಗ್ಗೆ ಮಾತನಾಡುವುದು ಅನಾಗರಿಕತನ, ಕುಚೇಷ್ಠೆ. ಪಕ್ಷದ ಯಾವುದೇ ಶಾಸಕ, ಕಾರ್ಯಕರ್ತನೂ ಈ ಬಗ್ಗೆ ಮಾತನಾಡಬಾರದು. ಸಿಎಂ ಸ್ಥಾನದ ಬಗ್ಗೆ ಮಾತನಾಡುವುವರು ಅನಾಗರಿಕರು ಎಂದು ಸಂಸದ ಎ. ನಾರಾಯಣಸ್ವಾಮಿ ಗುಡುಗಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಬಗ್ಗೆ ತೀರ್ಮಾನ ಮಾಡುವುದು ಹೈಕಮಾಂಡ್. ಈ ಬಗ್ಗೆ ಶಾಸಕರು ಅಥವಾ ಕಾರ್ಯಕರ್ತರು ಮಾತನಾಡಬಾರದು ಎಂದಿದ್ದಾರೆ.

ಇದನ್ನೂ ಓದಿ:ಬಿಜೆಪಿ ಶಿಸ್ತಿನ ಪಕ್ಷ, ಬಿಎಸ್ ವೈ ಶಿಸ್ತಿನ ನಾಯಕ: ಸಚಿವ ಈಶ್ವರಪ್ಪ

ಶಾಸಕರ ಸಹಿ ಸಂಗ್ರಹದ ಬಗ್ಗೆ ರಾಜ್ಯಧ್ಯಕ್ಷರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಸಿಎಂ ಬದಲಾವಣೆ ವಿಚಾರದ ಚರ್ಚೆ ಕಾರ್ಯಕರ್ತರಲ್ಲಿ ಬರಬಾರದು. ಬಿಜೆಪಿಯಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆಯೇ ಇಲ್ಲ ಎಂದರು.

ಭಿನ್ನಮತ ಶಮನ ಮಾಡುವ ಗಂಡಸುತನ, ಎದೆಗಾರಿಕೆ ಬಿಎಸ್ ಯಡಿಯೂರಪ್ಪ ಅವರಿಗಿದೆ. ಯಾರಾದರೂ ದೆಹಲಿಗೆ ಹೋಗಿಬಂದರೆ ಅದು ಅವರ ಹುಚ್ಚುತನ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಗೆ ಸಂಸದ ನಾರಾಯಣಸ್ವಾಮಿ ಟಾಂಗ್ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next