Advertisement

ಸಂಸದ ಡಿ.ಕೆ. ಸುರೇಶ್‌ ದೇಶ ವಿಭಜನೆ ಮಾತನ್ನಾಡಿಲ್ಲ: ಡಿಕೆಶಿ ಸಮರ್ಥನೆ

09:23 PM Apr 02, 2024 | Team Udayavani |

ಬೆಂಗಳೂರು: ಸಂಸದ ಡಿ.ಕೆ. ಸುರೇಶ್‌ ಅವರು ದೇಶ ವಿಭಜನೆ ಮಾಡುವ ಮಾತುಗಳನ್ನೇ ಆಡಿಲ್ಲ ಎಂದು ಡಿ.ಕೆ. ಸುರೇಶ್‌ ಸಹೋದರರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ ವಿಭಜನೆ ಮಾಡುವ ಮಾತುಗಳನ್ನು ಯಾರೂ ಆಡಿಲ್ಲ. ತೆರಿಗೆ ಹಂಚಿಕೆಯಲ್ಲಿ ಇದೇ ರೀತಿ ಅನ್ಯಾಯವಾದರೆ, ಜನ ಆಲೋಚನೆ ಮಾಡುವಂತಹ ಪರಿಸ್ಥಿತಿ ಬರಬಹುದು ಎಂದು ಸುರೇಶ್‌ ಹೇಳಿದ್ದಾರೆ. ಅದೇನೇ ಇರಲಿ, ಡಿ.ಕೆ. ಸುರೇಶ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಸಿಕೊಂಡಿದ್ದಕ್ಕೆ ಅವರಿಗೆ ಅಭಿನಂದನೆಗಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next