Advertisement

ದೇವಾಲಯದ ಪ್ರಾಂಗಣದಲ್ಲೇ ಅರ್ಚಕರಿಂದ 5 ರ ಬಾಲೆಯ ಗ್ಯಾಂಗ್‌ರೇಪ್‌ 

10:27 AM Oct 04, 2018 | Team Udayavani |

ಭೂಪಾಲ್‌:  5ವರ್ಷದ ಬಾಲಕಿಗೆ  ಅರ್ಚಕರಿಬ್ಬರು ಸಿಹಿ ತಿಂಡಿಯ ಆಮಿಷ ನೀಡಿ ದೇವಾಲಯದ ಪ್ರಾಂಗಣಕ್ಕೆ ಕರೆದೊಯ್ದು ಗ್ಯಾಂಗ್‌ ರೇಪ್‌ ಎಸಗಿದ ಹೇಯ ಘಟನೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. 

Advertisement

ಬಡ ರೈತನ ಮಗಳಾಗಿರುವ ಬಾಲಕಿಯನ್ನು ಇಬ್ಬರು ದೇವಾಲಯಕ್ಕೆ ಕರೆದೊಯ್ದು ಹೇಯ ಕೃತ್ಯ ಎಸಗಿದ್ದಾರೆ. ಬಳಿಕ ಮನೆಯ ಬಳಿ ಬಿಟ್ಟು ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೆದರಕಿಕೆ ಹಾಕಿದ್ದಾರೆ.

ತೀವ್ರ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ವಿಚಾರಿಸಿದಾಗ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳಾದ 55 ವರ್ಷದ ರಾಜು ಪಂಡಿತ್‌ ಮತ್ತು 45 ವರ್ಷದ ಬಾತೋಲಿ ಪ್ರಜಾಪತಿ ಎಂಬ ಇಬ್ಬರನ್ನು  ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಬೇರೆ ಬಾಲಕಿಯರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next