Advertisement

ಬಾಲಕೃಷ್ಣರ ಸಿನಿಮಾ ಚಿತ್ರೀಕರಣಕ್ಕಾಗಿ ಲೋಕೇಶನ್‌ ವೀಕ್ಷಣೆ

07:24 PM Feb 09, 2021 | Team Udayavani |

ಗಂಗಾವತಿ: ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಕೃಷ್ಣ ಅವರು ಅಭಿನಯದ ಸಿನಿಮಾದ ಚಿತ್ರೀಕರಣ  ಮಾಡಲು ತಾಲೂಕಿನ ಗೂಗಿಬಂಡಿ, ದೇವಘಾಟ, ಕಡೆಬಾಗಲು, ಹನುಮಮಹಳ್ಳಿ, ಸಾಣಾಪೂರ ಕೆರೆ, ವಿರೂಪಾಪೂರಗಡ್ಡಿ ಹಾಗೂ ನಾರಾಯಣಪೇಟೆ ಗ್ರಾಮಗಳ ಹತ್ತಿರದ ಸ್ಥಳಗಳನ್ನು ನಿರ್ದೇಶಕ ಬೋಯಪಾಟೀ ಶ್ರೀನಿವಾಸ ಪರಿಶೀಲಿಸಿದರು.

Advertisement

ನಿರ್ದೇಶಕ ಬೋಯಪಾಟೀ ಶ್ರೀನಿವಾಸ ಅವರು ತೆಲುಗು ಭಾಷೆಯ ಲೆಜೆಂಡ್‌, ಸಿಂಹ, ಸರೈನಾಡು, ವಿನಯವಿಧೇಯರಾಮಾ ಸೇರಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನೂ ನಾಮಕರಣ ಮಾಡದ ಬಾಲಕೃಷ್ಣ ಅಭಿನಯದ ಚಿತ್ರವನ್ನು ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಉಳಿದ ಭಾಗವನ್ನು ಸಂಡೂರು, ಹಂಪಿ, ಕಿಷ್ಕಿಂದಾ, ಅಂಜನಾದ್ರಿ ಬೆಟ್ಟ ಪ್ರದೇಶ ಹಾಗೂ ತುಂಗಭದ್ರಾ ನದಿಯ ದಡದಲ್ಲಿರುವ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಭಾಷೆ ಬೆಳೆಸುವಲ್ಲಿ ಕಸಾಪ ಪಾತ್ರ ಮಹತ್ವದು

ಈಗಾಗಲೇ ತೆಲುಗಿನ ಶ್ರೀಆಂಜನೇಯ, ಪೂರ್ಣಿಮಾ ಹಾಗೂ ಕನ್ನಡದ ರಣವಿಕ್ರಂ, ಜೇಮ್ಸ್‌ ಸೇರಿ ಹಲವು ಚಿತ್ರಗಳು ತಾಲೂಕಿನ ಆನೆಗೊಂದಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next