Advertisement

ಬೈಕ್‌ ಸೈಕ್ಲಿಂಗ್‌: ರಾಜ್ಯಕ್ಕೆ ಎರಡು ಚಿನ್ನ

04:34 PM Feb 21, 2020 | keerthan |

ಬೆಳಗಾವಿ: ಭಾರತೀಯ ಸೈಕ್ಲಿಂಗ್‌ ಒಕ್ಕೂಟ ಹಾಗೂ ಉತ್ತರಾಖಂಡ ಸೈಕ್ಲಿಂಗ್‌ ಸಂಸ್ಥೆ ಜಂಟಿ ಆಶ್ರಯದಲ್ಲಿ ಉತ್ತರಾಖಂಡದ ಹಲ್‌ ವಾಣಿಯಲ್ಲಿ ಆರಂಭವಾದ 16ನೇ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಕರ್ನಾಟಕದ ಸ್ಪರ್ಧಿಗಳು 2 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಗಳಿಸಿದ್ದಾರೆ.

Advertisement

ವಿಜಯಪುರದ ರಾಘವೇಂದ್ರ ವಂದಾಲ ಹಾಗೂ ಮೈಸೂರಿನ ಚರಿತಗೌಡ ಮೊದಲ ದಿನವೇ ಚಿನ್ನದ ಪದಕ ಬಾಚಿಕೊಂಡು ಗಮನಸೆಳೆದರು.

14 ವರ್ಷದೊಳಗಿನ ಬಾಲಕರ ವಿಭಾಗದ 2 ಲ್ಯಾಪ್‌ ವೈಯಕ್ತಿಕ ಟೈಮ್‌ ಟ್ರಯಲ್‌ನಲ್ಲಿ ವಿಜಯಪುರದ ಸೈಕ್ಲಿಂಗ್‌ ಕ್ರೀಡಾನಿಲಯದ ರಾಘವೇಂದ್ರ ವಂದಾಲ 22.54.673 ಸಮಯದಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದರು.

ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಕರೆನ ಮಾರ್ಶಲ್‌ 2 ಲ್ಯಾಪ್‌ ವೈಯಕ್ತಿಕ ಟೈಮ್‌ ಟ್ರಯಲ್‌ನಲ್ಲಿ 31.08.824 ಸಮಯದಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಭಾಜನರಾದರು. 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರಿನ ಚರಿತಗೌಡ 3 ಲ್ಯಾಪ್‌ ವೈಯಕ್ತಿಕ ಟೈಮ್‌ ಟ್ರಯಲ್‌ನಲ್ಲಿ 35.55.598 ಸಮಯದಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಜೋಸ್ನಾ ಕಂಚಿನ ಪದಕ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next