Advertisement

ಮೋಟಾರ್‌ ಸೈಕಲ್‌ ಸ್ಪರ್ಧಿ ಸಿ.ಎಸ್‌. ಸಂತೋಷ್‌ ಚೇತರಿಕೆ

12:30 AM Jan 14, 2021 | Team Udayavani |

ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ನಡೆದ ಡಕರ್‌ ರ್ಯಾಲಿ ವೇಳೆ ಅಪಘಾತಕ್ಕೀಡಾಗಿ ಕೋಮಾಕ್ಕೆ ಜಾರಿದ ಕರ್ನಾಟಕದ ಮೋಟಾರ್‌ ಸೈಕಲ್‌ ರೇಸರ್‌ ಸಿ.ಎಸ್‌. ಸಂತೋಷ್‌ ಈಗ ಚೇತರಿಸಿಕೊಂಡಿದ್ದಾರೆ. ಜೆಡ್ಡಾ ಆಸ್ಪತ್ರೆಗೆ ದಾಖಲಾದ ಅವರಿಗೆ ಪ್ರಜ್ಞೆ ಮರಳಿದ್ದು, ಮುಂದಿನ ಚಿಕಿತ್ಸೆಗಾಗಿ ಭಾರತಕ್ಕೆ  ತೆರಳಲಡ್ಡಿ ಯಿಲ್ಲ ಎಂದು ವೈದ್ಯರು ಸೂಚಿಸಿದ್ದಾರೆ.

Advertisement

“ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಇನ್ನೂ ಸ್ವಲ್ಪ ಕಾಲ ತೀವ್ರ ನಿಗಾದಲ್ಲಿ ಇರಿಸಬೇಕಾಗುತ್ತದೆ. ಸ್ಕ್ಯಾನಿಂಗ್‌ ಹಾಗೂ ಇನ್ನಿತರ ವೈದ್ಯಕೀಯ ವರದಿಯನ್ನು ಪರಿಶೀಲಿಸಲಾಗಿದೆ. ಅವರನ್ನು ಭಾರತಕ್ಕೆ ಕರೆದೊಯ್ಯಲು ಯಾವುದೇ ಸಮಸ್ಯೆ ಇಲ್ಲ. ಅಲ್ಲಿ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಮುಂದುವರಿಸಬಹುದಾಗಿದೆ’ ಎಂದು ಹೀರೋ ಮೋಟಾರ್‌ ನ್ಪೋರ್ಟ್ಸ್ ಟೀಮ್‌ ರ್ಯಾಲಿಯ ಪ್ರಕಟನೆ ತಿಳಿಸಿದೆ.

“ಸಂತೋಷ್‌ ನಿರೀಕ್ಷೆಗೂ ಮಿಗಿಲಾಗಿ ಚೇತರಿಕೆ ಕಂಡಿದ್ದಾರೆ. ಅವರಿನ್ನು ಕೌಟುಂಬಿಕ ವಾತಾವರಣದಲ್ಲಿ ಚಿಕಿತ್ಸೆ ಪಡೆಯಬಹುದು. ಇದರಿಂದ ಇನ್ನಷ್ಟು ಕ್ಷಿಪ್ರ ಗತಿಯಲ್ಲಿ ಚೇತರಿಕೆ ಕಾಣಲಿದ್ದಾರೆ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next