Advertisement

ಮೂವರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ತಾಯಿ

11:48 AM Jun 19, 2019 | Vishnu Das |

ಕೊಪ್ಪಳ: ಮೂವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದಹೃದಯ ವಿದ್ರಾವಕ ಘಟನೆ ಕುಕನೂರು ತಾಲೂಕಿನ ಯರೇಹಂಚಿನಾಳ ಎಂಬಲ್ಲಿ ಸೋಮವಾರ ನಡೆದಿದೆ.

Advertisement

ಯಲ್ಲಮ್ಮ ಎಂಬಾಕೆ ಮಕ್ಕಳಾದ ಅಕ್ಷತಾ (7),ಕಾವ್ಯಾ(4)ಮತ್ತು ನಾಗರಾಜ್‌(2) ರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ಬಳಿಕ ನೇಣಿಗೆ ಶರಣಾಗಿದ್ದಾಳೆ.

ಅಕ್ಷತಾಳನ್ನು ನೀರಿನ ಹಂಡೆಯಲ್ಲಿ , ಕಾವ್ಯಾಳನ್ನು ಬಕೆಟ್‌ನಲ್ಲಿ ಮತ್ತು ನಾಗರಾಜ್‌ನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಹತ್ಯೆಗೈದಿದ್ದಾಳೆ.

ಯಾವ ಕಾರಣಕ್ಕಾಗಿ ಯಲ್ಲಮ್ಮ ಕಠಿಣ ನಿರ್ಧಾರ ತಳೆದಿದ್ದಾಳೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಕೆಲ ಗ್ರಾಮಸ್ಥರ ಪ್ರಕಾರ ಪತಿಯ ಕಿರುಕುಳದಿಂದಲಾಗಿಯೇ ಹೀಗೆ ಮಾಡಿಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.

ಪತಿ ಕುಡಿದು ಬಂದು ಗಲಾಟೆಮಾಡುತ್ತಿದ್ದ ಎಂದು ಹೇಳಲಾಗಿದ್ದು, ಕೃತ್ಯ ನಡೆದಾಗ ಮನೆಯಲ್ಲಿ ಇರಲ್ಲಿಲ್ಲ ಎಂದು ಹೇಳಲಾಗಿದೆ.

Advertisement

ತನಿಖೆ ನಡೆಸುತ್ತಿದ್ದು ನಿಖರ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಕೊಪ್ಪಳ ಎಸ್‌ಪಿ ರೇಣುಕಾ ಸುಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next