Advertisement

ಮೋರ್ಟು-ಬೆಳ್ಳಾಲ-ಕೆರಾಡಿ ರಸ್ತೆ: ದುರಸ್ತಿ ಎಂದು?

01:00 AM Jan 20, 2019 | Team Udayavani |

ಆಜ್ರಿ: ಮೋರ್ಟು – ಬೆಳ್ಳಾಲ- ನಂದ್ರೋಳ್ಳಿ – ಕೆರಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಮರು ಕಿತ್ತು ಹೋಗಿ ಸಂಚಾರವೇ ದುಸ್ತರವೆನಿಸಿದೆ. ಸುಮಾರು 7 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ಭಾಗದ ಜನ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. 

Advertisement

ಸುಮಾರು 6 ವರ್ಷಗಳ ಹಿಂದೆ ಡಾಮರೀಕರಣ ವಾದ ರಸ್ತೆಯಲ್ಲಿ ಈಗ ಡಾಮರೇ ಇಲ್ಲದೇ ಮಣ್ಣಿನ ರಸ್ತೆಯಂತಾಗಿದೆ. ವಾಹನಗಳೆಲ್ಲ ಹೋಗುವಾಗ ಧೂಳಿ ನಿಂದಾಗಿ ಹಿಂದಿನಿಂದ ಚಲಿಸುವ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. 

ಪ್ರಮುಖ ರಸ್ತೆ
ಈ ರಸ್ತೆ ಮೋರ್ಟು ಹಾಗೂ ಬೆಳ್ಳಾಲದಿಂದ ಕೆರಾಡಿ, ನಂದ್ರೋಳ್ಳಿ, ವಂಡ್ಸೆ, ಮಾರಣಕಟ್ಟೆ ಕಡೆಗೆ ತೆರಳಲು ಪ್ರಮುಖವಾದ ರಸ್ತೆಯಾಗಿದೆ. ನೂರಾರು ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. 

ಬಸ್‌ ಬರುತ್ತದೆ
ಈ ರಸ್ತೆ ಇಷ್ಟೊಂದು ಹದಗೆಟ್ಟಿದ್ದರೂ ಇದೇ ಮಾರ್ಗವಾಗಿ ಕುಂದಾಪುರದಿಂದ ಬಸ್‌ವೊಂದು ಬರುತ್ತದೆ. ಕುಂದಾಪುರ – ನಂದ್ರೋಳ್ಳಿ – ವಂಡ್ಸೆ – ಬೆಳ್ಳಾಲ – ಮೂಡುಮಂದವಾಗಿ ಈ ಬಸ್‌ ಸಂಚರಿಸುತ್ತದೆ. 

ದುರಸ್ತಿಯೇ ಆಗಿಲ್ಲ
ಈ ರಸ್ತೆ 6 ವರ್ಷಗಳ ಹಿಂದೆ ಮೊದಲ ಬಾರಿಗೆ ಡಾಮರೀಕರಣವಾಗಿತ್ತು. ಆ ಬಳಿಕ ಈ ವರೆಗೆ ಮರು ಡಾಮರೀಕರಣವೇ ಆಗಿಲ್ಲ. ಕನಿಷ್ಠ ಪಕ್ಷ ಹೊಂಡ – ಗುಂಡಿಗಳಿಗೆ ತೇಪೆ ಹಾಕುವ ಕಾರ್ಯ ಕೂಡ ಯಾರೂ ಮಾಡಿಲ್ಲ ಎನ್ನುವುದು ಇಲ್ಲಿನ ಜನರ ಆರೋಪ.  

Advertisement

ಈ ಸಲವಾದರೂ ದುರಸ್ತಿಯಾಗಲಿ
ನಾವು ನಿತ್ಯ ಇದೇ ರಸ್ತೆಯಿಂದ ಸಂಚರಿಸುತ್ತಿದ್ದು, ಮೋರ್ಟು – ಬೆಳ್ಳಾಲ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಇದೇ ಮಾರ್ಗವನ್ನು ಹೆಚ್ಚಿನವರು ಅವಲಂಬಿಸಿದ್ದಾರೆ. ಈ ಬಾರಿಯಾದರೂ ಈ ರಸ್ತೆಯನ್ನು ದುರಸ್ತಿ ಮಾಡಿದರೆ ತುಂಬಾ ಪ್ರಯೋಜನವಾಗಲಿದೆ. ಪ್ರತಿ ವರ್ಷ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೂ ಈ ರಸ್ತೆ ಸರಿಪಡಿಸಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. 
-ಮೋರ್ಟು, ಬೆಳ್ಳಾಲ ಗ್ರಾಮಸ್ಥರು 

ಮರು ಡಾಮರು ಕಾಮಗಾರಿಗೆ ಪ್ರಯತ್ನ
ಮೋರ್ಟು- ಬೆಳ್ಳಾಲ- ಕೆರಾಡಿ ರಸ್ತೆ ಅಭಿವೃದ್ಧಿ ಕುರಿತಂತೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ, ಮುಂದಿನ ದಿನಗಳಲ್ಲಿ ಅನುದಾನ ಮೀಸಲಿಡಲಾಗುವುದು. ಈ ರಸ್ತೆಯ ಮರು ಡಾಮರೀಕರಣಕ್ಕೆ ಆದ್ಯತೆ ಮೇರೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. 
-ಬಿ.ಎಂ. ಸುಕುಮಾರ್‌ ಶೆಟ್ಟಿ,  ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next