Advertisement

ಪ್ರತೀ ತಿಂಗಳು 70ಕ್ಕೂ ಅಧಿಕ ಭ್ರೂಣಹತ್ಯೆ!- ತೊಟ್ಟಿ, ಶೌಚಾಲಯ ಸೇರುತ್ತಿದ್ದ ಭ್ರೂಣಗಳು

12:28 AM Dec 03, 2023 | Team Udayavani |

ಬೆಂಗಳೂರು: ಪ್ರತೀ ತಿಂಗಳು ಸರಾಸರಿ 70ಕ್ಕೂ ಹೆಚ್ಚು ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡು ತ್ತಿದ್ದು, ಕೆಲವು ಭ್ರೂಣಗಳನ್ನು ವೈದ್ಯಕೀಯ ತ್ಯಾಜ್ಯದಲ್ಲಿ, ಇನ್ನು ಕೆಲವನ್ನು ಶೌಚಾ ಲಯ ಅಥವಾ ಕಾವೇರಿ ನದಿಯಲ್ಲಿ ಎಸೆಯುತ್ತಿದ್ದೆವು…’

Advertisement

ಪ್ರಕರಣದಲ್ಲಿ ಸೆರೆ ಯಾಗಿರುವ ಡಾ| ಚಂದನ್‌ ಬಲ್ಲಾಳ್‌ನ ಮಾತಾ ಆಸ್ಪತ್ರೆ ಮತ್ತು ಆಯುರ್ವೇದಿಕ್‌ ಆಸ್ಪತ್ರೆಯ ನರ್ಸ್‌ ಮಂಜುಳಾ ಪೊಲೀಸರ ಎದುರು ಇಂತಹ ಸ್ಫೋಟಕ ಹೇಳಿಕೆ ನೀಡಿದ್ದಾಳೆ. ಮತ್ತೂಂದೆಡೆ ಕಳೆದ 1 ವರ್ಷದಲ್ಲಿ ಮಾತಾ ಆಸ್ಪತ್ರೆ ಮತ್ತು ಆಯುರ್ವೇದಿಕ್‌ ಆಸ್ಪತ್ರೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭ್ರೂಣಗಳ ಹತ್ಯೆ ಮಾಡಲಾಗಿದೆ ಎಂಬುದು ಈಕೆಯ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆ ಮೂಲದ ಮಂಜುಳಾ 2021ರಲ್ಲಿ ನರ್ಸಿಂಗ್‌ ಪದವಿ ಮುಗಿಸಿ ಬೇರೆ ಬೇರೆ ಆಸ್ಪತ್ರೆ ಯಲ್ಲಿ ಕೆಲಸ ಮಾಡಿದ್ದಳು. 2022ರಲ್ಲಿ ಮಾತಾ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸಕ್ಕೆ ಸೇರಿದ್ದು, 3 ತಿಂಗಳ ಕಾಲ ಇಲ್ಲಿ ಕೆಲಸ ಮಾಡಿದ್ದಳು. ಇಲ್ಲಿಂದಲೇ ಚಂದನ್‌ ಸೂಚನೆ ಮೇರೆಗೆ ಗರ್ಭಪಾತ ಕೃತ್ಯ ಎಸಗುತ್ತಿದ್ದಳು.

ಬಳಿಕ ಆತನದ್ದೇ ಆಯುರ್ವೇದಿಕ್‌ ಆಸ್ಪತ್ರೆಗೆ ವರ್ಗಾವಣೆಗೊಂಡು ಅಲ್ಲಿಯೂ ಕೃತ್ಯ ಮುಂದುವರಿಸಿದ್ದಳು. ಇದೇ ಆಸ್ಪತ್ರೆಯ ಮೇಲ್ಭಾಗದಲ್ಲಿರುವ ಕೋಣೆಯಲ್ಲಿ ಆಕೆಗೆ ಆಶ್ರಯ ನೀಡಲಾಗಿತ್ತು.

ಕಾವೇರಿ ಮಡಿಲಿಗೆ ಹೆಣ್ಣು ಭ್ರೂಣಗಳು!
ಚಂದನ್‌ ಬಲ್ಲಾಳ್‌ ಸೂಚನೆ ಮೇರೆಗೆ ಪ್ರತೀ ತಿಂಗಳು 70ಕ್ಕೂ ಹೆಚ್ಚು ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡಿ ಎಸೆಯಲಾಗುತ್ತಿತ್ತು. “12 ವಾರಗಳ ಒಳಗಿನ ಭ್ರೂಣಗಳನ್ನು ಶೌಚಾಲಯಕ್ಕೆ ಎಸೆದು ಫ್ಲಷ್‌ ಮಾಡುತ್ತಿದ್ದೆವು. ಮೂರು ತಿಂಗಳ ಅಥವಾ ಅದಕ್ಕಿಂತ ಮೇಲ್ಪಟ್ಟ ಭ್ರೂಣಗಳನ್ನು ವೈದ್ಯಕೀಯ ತ್ಯಾಜ್ಯ ಎಂದು ಎಸೆಯುತ್ತಿದ್ದೆವು. ನಾಲ್ಕೈದು ಅಥವಾ ಆರು ತಿಂಗಳ ಭ್ರೂಣಗಳನ್ನು ಪ್ರಯೋಗಾಲಯದ ಸಿಬಂದಿ ನಿಸಾರ್‌ಗೆ ಕೊಡುತ್ತಿದ್ದೆವು. ಆತ ಅವುಗಳನ್ನು ಕಾವೇರಿ ನದಿಗೆ ಎಸೆಯುತ್ತಿದ್ದ. ಕೆಲವೊಮ್ಮೆ 7 ತಿಂಗಳ ಮಗು ತೆಗೆಯುವಾಗ ತಾಯಿಗೆ ಮಾತ್ರೆಗಳು ಹಾಗೂ ಇಂಜೆಕ್ಷನ್‌ ನೀಡುತ್ತಿದ್ದೆವು. ಬಳಿಕ ಸಾಮಾನ್ಯ ಹೆರಿಗೆ ಅಥವಾ ಸಿಸೇರಿಯನ್‌ ಮಾಡಿ ಹೊರ ತೆಗೆಯುತ್ತಿದ್ದೆವು. ಸ್ವಲ್ಪ ಹೊತ್ತಿನ ಬಳಿಕ ಮಗು ಸಾಯುತ್ತಿತ್ತು. ಅವುಗಳನ್ನು ಕಾವೇರಿ ನದಿಗೆ ಎಸೆಯಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಆಪ್ತ ಸಮಾಲೋಚಕಿ ಆಗಿದ್ದಳು
ಈಕೆ ಚಂದನ್‌ ಬಲ್ಲಾಳ್‌ನ ಆಯುರ್ವೇದಿಕ್‌ ಆಸ್ಪತ್ರೆಯಲ್ಲಿ ಶುಶ್ರೂಶಕಿ ಜತೆಗೆ ರೋಗಿಗಳಿಗೆ ಆಪ್ತ ಸಮಾಲೋಚಕಿಯೂ ಆಗಿದ್ದಳು ಎಂಬುದು ಗೊತ್ತಾಗಿದೆ. 2022ಕ್ಕೂ ಮೊದಲು ಒಂದೆರಡು ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದ ಮಂಜುಳಾ ಆ ಸಂಪರ್ಕದ ಆಧಾರದ ಮೇಲೆ ಭ್ರೂಣಲಿಂಗ ಪತ್ತೆ ಹಚ್ಚುವ ಅವಕಾಶವಿದೆ ಎಂದು ಮಾತಾ ಆಸ್ಪತ್ರೆಗೆ ಕರೆಯಿಸಿಕೊಳ್ಳುತ್ತಿದ್ದಳು. ಭ್ರೂಣ ಪತ್ತೆ ಹಚ್ಚಿ, ಹೆಣ್ಣು ಮಗುವಾದರೆ, ಗರ್ಭಪಾತಕ್ಕೆ ಹೆತ್ತವರ ಒಲವಿದ್ದರೆ, ಇಲ್ಲಿಯೇ ಮಾಡಲಾಗುತ್ತದೆ ಎಂದು ಗರ್ಭಪಾತ ಮಾಡಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಯಲ್ಲಿ ಆಕೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿದ ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಮತ್ತು ತಂಡ ಈಕೆಯ ಬೆನ್ನು ಬಿದ್ದಿತ್ತು. ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದ ಆಸ್ಪತ್ರೆಯಿಂದಲೇ ಮಂಜುಳಾನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

3 ಸಾವಿರ ಗಡಿ ದಾಟಿದ ಭ್ರೂಣ ಹತ್ಯೆ
ಪ್ರಕರಣದಲ್ಲಿ ಇದುವರೆಗೆ ಬಂಧನಕ್ಕೆ ಒಳಗಾಗಿರುವ ಎಲ್ಲ ಆರೋಪಿಗಳು 3 ವರ್ಷಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಹೆಣ್ಣುಭ್ರೂಣಗಳ ಹತ್ಯೆ ಮಾಡ ಲಾಗಿದೆ ಎಂದು ಹೇಳಿಕೆ ನೀಡಿ ದ್ದರು. ಆದರೆ ನರ್ಸ್‌ ಮಂಜುಳಾ ಹೇಳಿಕೆ ಆಘಾತ ನೀಡಿದೆ. ಕಳೆದ ಒಂದು ವರ್ಷದಲ್ಲೇ ಒಂದು ಸಾವಿರಕ್ಕೂ ಹೆಚ್ಚು ಭ್ರೂಣಗಳ ಹತ್ಯೆಗೈಯಲಾಗಿದೆ ಎಂದು ಆಕೆ ಹೇಳಿದ್ದಾಳೆ. ಹಾಗಾಗಿ ಮೂರು ವರ್ಷದಲ್ಲಿ ಸರಾಸರಿ ಮೂರು ಸಾವಿರಕ್ಕೂ ಹೆಚ್ಚು ಭ್ರೂಣಗಳ ಹತ್ಯೆ ನಡೆದಿದೆ ಎಂದು ಅಂದಾಜಿಸ ಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next