Advertisement

50 ಕ್ವಿಂಟಾಲ್‌ಗೂ ಹೆಚ್ಚಿನ ಒಣ ಮೆಣಸಿನಕಾಯಿ ರಾಶಿಗೆ ಬೆಂಕಿ-Video

03:28 PM Apr 04, 2023 | Team Udayavani |

ಹೈದರಾಬಾದ್‌:  ರೈತರೊಬ್ಬರು ಬೆಳೆದಿದ್ದ ಸುಮಾರು 50 ಕ್ವಿಂಟಾಲ್‌ಗೂ ಹೆಚ್ಚಿನ ಒಣ ಮೆಣಸಿನಕಾಯಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಹೈದರಾಬಾದ್‌ನ NTR ಜಿಲ್ಲೆಯಲ್ಲಿ ನಡೆದಿದೆ. ಬೆಂಕಿಗೆ ಸಿಲುಕಿ ಮೆಣಸಿನಕಾಯಿಯ ರಾಶಿ ಹೊತ್ತಿ ಉರಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಈ ದುಷ್ಕೃತ್ಯದಿಂದ ರೈತನಿಗೆ ಸುಮಾರು 15 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಪೋಲಿಸರು ಹೇಳಿದ್ದಾರೆ. ತನ್ನ ಜಮೀನಿನಲ್ಲಿ ಮೆಣಸಿನಕಾಯಿಗಳನ್ನು ಒಣಗಿಸಲೆಂದು ರಾಶಿ ಹಾಕಿದ್ದ ಸ್ಥಳದಲ್ಲಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಸಮರ್ಪಕ ತನಿಖೆ ನಡೆಸಬೇಕು ಎಂದು ಸಂತ್ರಸ್ಥ ರೈತ ಆಗ್ರಹಿಸಿದ್ದಾನೆ.

ಇದನ್ನೂ ಓದಿವಿವಾಹಿತ ಮಹಿಳೆಯೊಂದಿಗೆ ಸಂಬಂಧ: ಕಾರಿನೊಳಗೆ ಕಟ್ಟಿಹಾಕಿ ವ್ಯಕ್ತಿಯ ಸಜೀವ ದಹನ

 

Advertisement

Advertisement

Udayavani is now on Telegram. Click here to join our channel and stay updated with the latest news.

Next