Advertisement

Khalistani: ಇನ್ನಷ್ಟು ಖಲಿಸ್ತಾನಿ ಪುಂಡರ ಆಸ್ತಿ ಜಪ್ತಿ

10:39 PM Sep 24, 2023 | Team Udayavani |

ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿರುವಂತೆಯೇ ದೇಶ ವಿರೋಧಿ ಕೃತ್ಯ ನಡೆಸುತ್ತಿರುವ ಖಲಿಸ್ಥಾನ ಉಗ್ರರಿಗೆ ಮತ್ತಷ್ಟು ಪಾಠ ಕಲಿಸಲು ಕೇಂದ್ರ ಸರಕಾರ ಮುಂದಾಗಿದೆ.

Advertisement

ಅಮೆರಿಕ, ಯು.ಕೆ., ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಖಲಿಸ್ಥಾನಿ ಹೋರಾಟಕ್ಕೆ ಬೆಂಬಲ ನೀಡುವವರನ್ನು ಗುರುತಿಸಿ, ಅವರಿಗೆ ನೀಡಲಾಗಿರುವ ಒಐಸಿ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿದೆ. ಈ ಮೂಲಕ ಅವರು ದೇಶ ಪ್ರವೇಶಿಸದಂತೆ ನಿರ್ಬಂಧ ಹೇರಲು ಮುಂದಾಗಿದೆ.

ಪಂಜಾಬ್‌ನಲ್ಲಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿದ ಬೆನ್ನಲ್ಲಿಯೇ ದೇಶವಿರೋಧಿಗಳ ವಿರುದ್ಧ ಮತ್ತೂಂದು ಹಂತದ ಕಠಿನ ಪ್ರಹಾರಕ್ಕೆ ಸರಕಾರ ಮುಂದಾಗಿದೆ. ಇದಲ್ಲದೆ 19 ಮಂದಿ ಖಲಿಸ್ಥಾನಿ ಕಿಡಿಗೇಡಿಗಳು ಹೊಂದಿರುವ ಆಸ್ತಿ ಜಪ್ತಿಗೆ ಸಿದ್ಧತೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಕೆನಡಾದ ಗುರುದ್ವಾರಗಳಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಕೊಲ್ಲಬೇಕು ಎಂದು ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ತೆಗೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next