Advertisement

ಕೇಂದ್ರದಿಂದ ಇನ್ನಷ್ಟು ಪರಿಹಾರ ಸಿಗುವ ಭರವಸೆ : ಸಿ.ಎಂ. ಬಿ ಎಸ್ ವೈ

12:40 PM Oct 23, 2019 | Suhan S |

ಬೆಂಗಳೂರು : ಉತ್ತರಕರ್ನಾಟಕದಲ್ಲಿ ಮಳೆ ಅನಾಹುತದಿಂದ ಸಾಕಷ್ಟು ಪ್ರಮಾಣದ ಹಾನಿ ಉಂಟಾಗಿದೆ, ಈಗಾಗಲೇ ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.

Advertisement

ನಗರದ ಡಾಲರ್ಸ್ ಕಾಲೋನಿ ನಿವಾಸದ ಬಳಿ ಮಾತಾನಾಡಿದ ಅವರು ಮತ್ತೆ ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಆಗಿದೆ, ಈಗಾಗಲೇ ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ,ಹಾನಿಯ ಅಂದಾಜು ಲೆಕ್ಕ ಹಾಕಿ ಕೇಂದ್ರದಿಂದ ಪರಿಹಾರ ಕೇಳುತ್ತೇವೆ, ಹಿಂದಿನ ನೆರೆ, ಅತಿವೃಷ್ಟಿ ಸಂಬಂಧ ಶೀಘ್ರದಲ್ಲೇ ಕೇಂದ್ರ ಮತ್ತಷ್ಟು ಪರಿಹಾರ ಕೊಡುವ ಭರವಸೆ ಇದೆ ಎಂದು ಹೇಳಿದರು.

ಇದೇ ವೇಳೇ ಮಾತಾನಾಡಿದ ಅವರು ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಪರಿಸರ ಇಲಾಖೆ ಅನುಮತಿ ಕೊಟ್ಟಿದೆ. ಆ ಮೂಲಕ ಯೋಜನೆ ಆರಂಭಿಸಲು ಶೇ. 90 ರಷ್ಟು ದಾರಿ ಸುಗಮ ಆಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕಳಸಾ ಬಂಡೂರಿ ವಿವಾದ ಇತ್ಯರ್ಥ ಮಾಡೋ ಭರವಸೆ ಕೊಟ್ಟಿದ್ದೀವಿ. ಅದರಂತೆ ಪ್ರಧಾನಿಯವರು ಯೋಜನೆ ಆರಂಭಕ್ಕೆ ಅವಕಾಶ ಮಾಕೊಟ್ಟಿದ್ದಾರೆ. ಪರಿಸರ ಇಲಾಖೆಯ ಅನುಮತಿ ವಿಚಾರ ನ್ಯಾಯಾಲಯದ ಗಮನಕ್ಕೆ ತರುತ್ತೇವೆ, ಯೋಜನೆ ಆರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next