Advertisement

ಹೊಸಬರ ಮೂರು ಮತ್ತೊಂದು!

03:14 PM Sep 21, 2021 | Team Udayavani |

“ಮೂರು ಮತ್ತೂಂದು’ ಹೀಗೊಂದು ವಿಭಿನ್ನ ಟೈಟಲ್‌ನ ಚಿತ್ರವೊಂದು ಆರಂಭವಾಗಿದ್ದು, ಈಗಾಗಲೇ ಶೇ 70ರಷ್ಟು ಚಿತ್ರೀಕರಣ ಮುಗಿಸಿದೆ. ಇದೊಂದು ಹಾರರ್‌ ಚಿತ್ರವಾಗಿದ್ದು, ಚಿತ್ರಕ್ಕೆ ಪ್ರಶಾಂತ್‌ ಅಂಕಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವಿಪ್ರ ಪ್ರೊಡಕ್ಷನ್ಸ್‌ನ ಡಿ ವೀಣಾ ಅವರು ನಿರ್ಮಿಸುತ್ತಿದ್ದಾರೆ.

Advertisement

ಚಿತ್ರದ ಬಾಕಿ ಇರುವ 4 ಹಾಡುಗಳು ಹಾಗೂ ಕ್ಲೈಮ್ಯಾಕ್ಸ್‌ ಅನ್ನು ಚಿಕ್ಕಮಗಳೂರು, ಸಕಲೇಶಪುರ, ಕುಶಾಲನಗರ, ಹಾಸನದ ಸುತ್ತಮುತ್ತ ನಡೆಸಲಾಗುತ್ತದೆ, ಈ ಚಿತ್ರದಲ್ಲಿ ಸಸ್ಪೆನ್ಸ್‌, ಲವ್‌ ಸ್ಟೋರಿ ಜೊತೆಗೆ ವಿಭಿನ್ನ ಹಾರರ್ ಕಥಾಹಂದರವನ್ನು ಹೇಳಲಾಗಿದೆ.

ಇದನ್ನೂ ಓದಿ:ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ಗೌಡ ನಾಯಕಿ

ಮೂರು ಮತ್ತೂಂದು ಅಂದರೆ ಮೂವರ ನಡುವೆ ಬರುವ ಮತ್ತೂಬ್ಬ ವ್ಯಕ್ತಿ ಯಾರು ಅನ್ನೋದೇ ಚಿತ್ರದ ಸಸ್ಪೆನ್ಸ್‌. ಈ ಚಿತ್ರದ ನಾಯಕಿ ಮಮತಾ. ಹರಹರ ಮಹಾದೇವ, ಜೈ ಹನುಮಾನ್, ಮಹಾಕಾಳಿ, ಶನಿ, ಗಟ್ಟಿಮೇಳ,ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಾಜ್‌ ಮಣೀಶ್‌ ಈ ಚಿತ್ರದ ನಾಯಕ.

ಉಳಿದ ತಾರಾಗಣದಲ್ಲಿ ಜೂ.ನರಸಿಂಹ ರಾಜು, ಮಂಡ್ಯ ಆನಂದ್‌, ಜಗದೀಶ್‌ ಮುಂತಾದವರು ನಟಿಸಿದ್ದಾರೆ. ಈ. ಚಿತ್ರಕ್ಕೆ ಸುರೇಶ್‌ ಬಾಬು ಅವರ ಛಾಯಾಗ್ರಹಣ, ಪಳನಿ ಸೇನಾಪತಿ ಅವರ ಸಂಗೀತ, ಕುಶಾಲ್‌ ಬರಗೂರು ಅವರ ಸಾಹಿತ್ಯ ಹಾಗೂ ಸಂಭಾಷಣೆ, ಹ್ಯಾರಿಸ್‌ ಜಾನಿ ಸಾಹಸ, ಕಲೈ ಮಾಸ್ಟರ್‌ ಅವರ ಕೊರಿಯಾಗ್ರಫಿ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next