Advertisement

ಊಟದ ತಟ್ಟೆ ತಗುಲಿದ ವಿಚಾರಕ್ಕೆ ಮಾರಾಮಾರಿ : ವಿದ್ಯಾರ್ಥಿಗೆ ಗಾಯ 

11:27 AM Jan 28, 2017 | Team Udayavani |

ಮೂಡಬಿದಿರೆ : ಇಲ್ಲಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ನಿಲಯದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

Advertisement

ಊಟದ ವೇಳೆ ತಟ್ಟೆ ತಗುಲಿತು ಎನ್ನುವ ಕಾರಣಕ್ಕೆ ಹೊಡೆದಾಟ ಆರಂಭವಾಗಿದ್ದು ಜಗಳದ ವೇಳೆ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. 

ತಲೆಗೆ ಗಾಯಗೊಂಡಿರುವ ದ್ವಿತೀಯ ಬಿಕಾಂ ವಿದ್ಯಾರ್ಥಿ ಸುಜನ್‌ ಎಂಬಾತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next