Advertisement

ಮೂಡಬಿದಿರೆ: ಎಬಿವಿಪಿ ಪ್ರತಿಭಟನೆ 

12:44 PM Nov 05, 2017 | Team Udayavani |

ಮೂಡಬಿದಿರೆ: ಅ. ಭಾ. ವಿ. ಪ. ಮತ್ತು ಸಂಘದ ಕಾರ್ಯಕರ್ತರ ಮೇಲಾಗುತ್ತಿರುವ ಹಿಂಸೆಯ ವಿರುದ್ಧ ನ. 11ರಂದು ಕೇರಳದ ರಾಜಧಾನಿಯ ತಿರುವನಂತಪುರದಲ್ಲಿ ಹಮ್ಮಿಕೊಳ್ಳಲಾಗುವ ‘ಚಲೋ ಕೇರಳ’ ಹೆಸರಿನ ಮಹಾರ್ಯಾಲಿಗೆ ಪೂರ್ವಭಾವಿಯಾಗಿ ದೇಶಾದ್ಯಂತ ಅ.ಭಾ. ವಿದ್ಯಾರ್ಥಿ ಪರಿಷತ್‌ ಹಮ್ಮಿಕೊಂಡಿರುವ ಪ್ರತಿಭಟನೆಯನ್ವಯ ಮೂಡಬಿದಿರೆ ಅ. ಭಾ. ವಿ. ಪ. ಘಟಕದ ವತಿಯಿಂದ ಗುರುವಾರ ಪ್ರತಿಭಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೇರಳದ ಪಿಣರಾಯಿ ವಿಜಯನ್‌ ಕಳೆದ 16 ತಿಂಗಳ ಅವಧಿಯಲ್ಲಿ 14ಕ್ಕೂ ಅಧಿಕ ಸಂಘಪರಿವಾರ, ರಾಷ್ಟ್ರೀಯವಾದಿ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ, ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ, ಮೂಡಬಿದಿರೆ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಯವರಿಗೆ ಈ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next