Advertisement

ಮೂಡುಬಿದಿರೆ: ಪೊಲೀಸ್‌ ನಗರ ಸಂಚಾರ

11:13 PM Jan 23, 2021 | Team Udayavani |

ಮೂಡುಬಿದಿರೆ: ಮಂಗ ಳೂರು ನಗರ ಪೊಲೀಸ್‌ ಆಯುಕ್ತ ಶಶಿ ಕುಮಾರ್‌ ಅವರು ಶನಿವಾರ ಮೊದಲ ಬಾರಿ ಮೂಡುಬಿದಿರೆಗೆ ಆಗಮಿಸಿ ಪೊಲೀಸರೊಂದಿಗೆ ಪೇಟೆಯಲ್ಲಿ ಸಂಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.

Advertisement

ಶ್ರೀ ಜೈನ ಮಠಕ್ಕೆ ಭೇಟಿ ನೀಡಿದ ಅವರು ಭಟ್ಟಾರಕ ಸ್ವಾಮೀಜಿಯವರೊಂದಿಗೆ ಶ್ರೀಗಳೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ನಗರ ಸಂಚಾರವನ್ನು ಆರಂಭಿಸಿದರು.

ಹನುಮಂತ ದೇವಸ್ಥಾನ ಮತ್ತು ಟೌನ್‌ ಮಸೀದಿಗೆ ಭೇಟಿ ನೀಡಿ ಮುಖಂಡರೊಂದಿಗೆ ಸಂವಹನ ನಡೆಸಿದರು. ಸಂಚಾ ರದೊಂದಿಗೆ ಸಾಗಿಬಂದ ಕಮಿಷನರ್‌ ಅವರು ಜನಸಾಮಾನ್ಯರೊಂದಿಗೆ ಬೆರೆತುಕೊಂಡು ಮಾತನಾಡಿ ಗಮನ ಸೆಳೆದರು. ಪೇಟೆಯ ಕಟ್ಟಡಗಳ ಬಗ್ಗೆ ಮೂಡುಬಿದಿರೆಯ ಪೊಲೀಸ್‌ ನಿರೀಕ್ಷಕ ಬಿ.ಎಸ್‌. ದಿನೇಶ್‌ ಕುಮಾರ್‌ ಅವರಿಂದ ವಿವರ ಪಡೆದುಕೊಂಡರು.

ಪಣಂಬೂರು ಎ.ಸಿ.ಪಿ. ಕೆ.ಯು. ಬೆಳ್ಳಿಯಪ್ಪ, ಪಣಂಬೂರು ಠಾಣಾ ನಿರೀಕ್ಷಕ ಹಝ¾ತ್‌ ಆಲಿ, ಮೂಲ್ಕಿ ವೃತ್ತ ನಿರೀಕ್ಷಕ ಕುಸುಮಾಧರ, ಮೂಡುಬಿದಿರೆ ಠಾಣೆಯ ಉಪನಿರೀಕ್ಷಕ ಸುದೀಪ್‌ ಪಾಲ್ಗೊಂಡಿದ್ದರು.

ಜನ ಸ್ನೇಹಿ ಕ್ರಮ :

Advertisement

“ಒಂದು ಪ್ರದೇಶವನ್ನು ಪರಿವೀಕ್ಷಿಸುವ “ಏರಿಯಾ ಫೆಮಿಲಿಯರೈಸೇಶನ್‌’ ಕಾರ್ಯಕ್ರಮದನ್ವಯ ಪೊಲೀಸ್‌ ಅಧಿಕಾರಿಗಳು ನಗರ ಸಂಚಾರ ನಡೆಸುವ ಪರಿಕ್ರಮ ಇದಾಗಿದೆ. ಬಹಳ ಮುಖ್ಯವಾಗಿ ಪೊಲೀಸರು ಜನಸ್ನೇಹಿಯಾಗಿರುವ ಜತೆಗೆ ಪಕ್ಷಪಾತವಿಲ್ಲದೆ ಎಲ್ಲರನ್ನೂ ಸಮಾನವಾಗಿ, ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು. ಎಲ್ಲೂ ರಾಜಕೀಯ, ರಾಜಕೀಯ ಹಸ್ತಕ್ಷೇಪವಿಲ್ಲದ ಹಾಗೆ ನೋಡಿಕೊಳ್ಳಬೇಕು. ಆದಷ್ಟು ಜನಸಂಪರ್ಕವನ್ನು ಹೆಚ್ಚಿಸಬೇಕು. ಅಪರಾಧ ಕೃತ್ಯಗಳು, ಅಕ್ರಮ ವ್ಯವಹಾರಗಳಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಬೇಕು. ಆರಾಧನ ತಾಣಗಳಲ್ಲಿ ಯಾವುದೇ ರೀತಿಯ ಅಶಾಂತಿ ತಲೆದೋರದ ಹಾಗೆ, ಸಾಮರಸ್ಯದ ಭಾವದಿಂದ ಜನರು ವ್ಯವಹರಿಸುವಂಥ ವಾತಾವರಣ ರೂಪಿಸುವುದು ಪೊಲೀಸರ ಕರ್ತವ್ಯ ಎಂದು ಪೊಲೀಸ್‌ ಕಮಿಷ ನರ್‌ ಎನ್‌. ಶಶಿಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next