Advertisement

ಮೂಡಬಿದಿರೆ: ಕೆಂಬಾವುಟ ಜಾಥಾ

11:39 AM Jan 01, 2018 | Team Udayavani |

ಮೂಡಬಿದಿರೆ: ಸಿಪಿಐ(ಎಂ) ಕಾರ್ಮಿಕ, ದಲಿತ ಮತ್ತು ಶೋಷಿತರ ಪರವಾಗಿ ಸದಾ ನಿಂತಿರುವ ಪಕ್ಷ ಎಂದು ಕಾರ್ಮಿಕ ಮುಖಂಡ ಯಾದವ ಶೆಟ್ಟಿ ಹೇಳಿದರು.

Advertisement

ಮೂಡಬಿದಿರೆಯಲ್ಲಿ ಜ. 2ರಿಂದ 5ರ ವರೆಗೆ ನಡೆಯುವ ಪಕ್ಷದ 22ನೇ ರಾಜ್ಯ ಸಮ್ಮೇಳನಕ್ಕೆ ಪೂರಕವಾಗಿ ನಡೆದ ‘ಕೆಂಬಾವುಟ ಜಾಥಾ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮ್ಮೇಳನಕ್ಕೆ ಪಕ್ಷದ ಪ್ರ. ಕಾ. ಸೀತಾರಾಮ ಯೆಚೂರಿ, ಸಮಿತಿಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಹಾಗೂ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ ಆಗಮಿಸಿ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದರು.

ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಬ್ಯಾಂಕ್‌ ಎಂಪ್ಲಾಯೀಸ್‌ ಫೆಡರೇಷನ್‌ ಆಫ್‌ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಬಿ.ಎಂ. ಮಾಧವ, ಡಿವೈಎಫ್‌ಐ ಜಿಲ್ಲಾ ಪ್ರ. ಕಾ. ಸುನೀಲ್‌ ಕುಮಾರ್‌ ಬಜಾಲ್‌, ಜಿಲ್ಲಾ ಅಧ್ಯಕ್ಷ ಇಮಿ¤ಯಾಜ್‌, ಮಹಾನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಸಂತೋಷ್‌ ಬಜಾಲ್‌, ಮುಖಂಡರಾದ ರಮಣಿ, ಕೃಷ್ಣಪ್ಪ
ಕೊಂಚಾಡಿ, ರಾಧಾ, ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next