Advertisement

Moodabidri: ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

11:34 PM Dec 24, 2023 | Team Udayavani |

ಮೂಡುಬಿದಿರೆ: ಇಲ್ಲಿನ ವಿದ್ಯಾರ್ಥಿ ನಿಲಯವೊಂದರ 5ನೇ ಮಹಡಿಯಲ್ಲಿ ವಾಸ್ತವ್ಯ ಇದ್ದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿ ಮನೋಜ್‌ ಎಂ. ಕವಲೂರ್‌ (17) ಶನಿವಾರ ರಾತ್ರಿ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಗದಗ ಜಿಲ್ಲೆಯ ಕದಂಪುರದ ಗೋಣಿಬಸವೇಶ್ವರ ದೇವಸ್ಥಾನದ ಬಳಿಯ ನಿವಾಸಿ, ಕೃಷಿಕ ಮಲ್ಲಪ್ಪ ಎನ್‌. ಕವಲೂರ್‌ ಅವರ ಪುತ್ರ ಮನೋಜ್‌ ತಾನು ವಾಸವಾಗಿದ್ದ ಕೊಠಡಿಯ ಪಕ್ಕದ ವಾಶ್‌ರೂಮ್‌ನಲ್ಲಿರುವ ಶೌಚಾಲಯದ ಬಾಗಿಲಿನ ಅಡ್ಡಕ್ಕೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next