Advertisement

ಬಡವರಿಗೆ ಅನ್ಯಾಯವಾದರೆ ಸೂಕ್ತ ಕ್ರಮ: ಶಾಸಕ ಕೋಟ್ಯಾನ್‌

12:26 PM Aug 05, 2018 | Team Udayavani |

ಮೂಡಬಿದಿರೆ: ಬಡ ಜನರು ಜೀವನ ನಡೆಸುವುದೇ ಕಷ್ಟ. ಹಾಗಿರುವಾಗ ಸರಕಾರಿ ಕೆಲಸಗಳಿಗಾಗಿ ಅವರು ಬಂದಾಗ ನಾವು ಸಾಧ್ಯವಾದಷ್ಟೂ ಸೇವೆ ನೀಡಬೇಕು. ಬಡವರಿಗೆ ಅನ್ಯಾಯವಾದಲ್ಲಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

Advertisement

ಇಲ್ಲಿನ ಸಮಾಜ ಮಂದಿರದಲ್ಲಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿ, ಆರ್‌ಟಿಸಿಗಳಲ್ಲಿ ಹೆಸರು ಹಾಗೂ ಮಾಹಿತಿಯನ್ನು ತಪ್ಪಾಗಿ ಉಲ್ಲೇಖಿಸಲಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಇದು ಮರುಕಳಿಸಬಾರದು. ನಿವೇಶನ ಮತ್ತು ಮನೆ ಇಲ್ಲದವರ ಬಗ್ಗೆ ಸಂಪೂರ್ಣ ಮಾಹಿತಿ ಸಿದ್ಧಪಡಿಸಬೇಕು. ಗ್ರಾಹಕರು ಸಲ್ಲಿಸುವ ಯಾವುದೇ ಅರ್ಜಿಯನ್ನು ತಿರಸ್ಕರಿಸಬಾರದು. ವಿವಿಧ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ನಿಜವಾದ ಫಲಾನುಭವಿಗಳಿಗೆ ಪ್ರಯೋಜನ ತಲುಪಬೇಕು. ರಾಷ್ಟ್ರೀಯ ಕುಟುಂಬ ಪರಿಹಾರದ ಮೊತ್ತ 6 ತಿಂಗಳ ಒಳಗೆ ಸಂಬಂಧಪಟ್ಟವರ ಕೈ ತಲುಪುವಂತೆ ಮಾಡಬೇಕು ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಕರಣಿಕರು ಹಾಗೂ ಪಿಡಿ ಒಗಳು ಉಪಸ್ಥಿತರಿದ್ದು, ಅಭಿವೃದ್ಧಿಗೆ ಸಂಬಂಧಿಸಿದ ಕೆಲವೊಂದು ಕಾನೂನಾತ್ಮಕ ತೊಡಕುಗಳ ಬಗ್ಗೆ ಚರ್ಚಿಸಿದರು. ಜಿ.ಪಂ. ಸದಸ್ಯರಾದ ಸುಚರಿತ ಶೆಟ್ಟಿ, ವಿನೋದ್‌ ಬೆಳ್ಳೂರು, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್‌, ನಾಗ ರಾಜ್‌ ಪೂಜಾರಿ, ದಿನೇಶ್‌ ಪೂಜಾರಿ, ಪ್ರಸಾದ್‌ ಕುಮಾರ್‌, ಮುಖಂಡರಾದ ಮೇಘನಾದ್‌ ಶೆಟ್ಟಿ, ಹರೀಶ್‌ ಎಂ.ಕೆ. ಮೊದಲಾದವರಿದ್ದರು. ಕಂದಾಯ ಅಧಿಕಾರಿ ದಿಲೀಪ್‌ ಸ್ವಾಗತಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next