Advertisement

Moodabidri ;ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ಬಜರಂಗ ದಳ

10:09 PM Jun 19, 2023 | Team Udayavani |

ಮೂಡುಬಿದಿರೆ: ಕೆಲ್ಲಪುತ್ತಿಗೆಯಿಂದ ಹೊರಟ ರಿಡ್ಜ್ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಗೋವುಗಳನ್ನು ಬಜರಂಗದಳದ ಕಾರ್ಯಕರ್ತರು ಮತ್ತು ಮೂಡುಬಿದಿರೆ ಪೊಲೀಸರು ಇಂದು ಮುಂಜಾನೆ ರಕ್ಷಿಸಿದ ಘಟನೆ ನಡೆದಿದೆ.

Advertisement

ಕೆಲ್ಲಪುತ್ತಿಗೆ ಕಡೆಯಿಂದ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಬಜರಂಗ ದಳದ ಕಾರ್ಯಕರ್ತರು ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದು ಜಂಟಿ ಕಾರ್ಯಾಚರಣೆ ನಡೆಸುತ್ತ ಬಂದು, ಕೆಲ್ಲಪುತ್ತಿಗೆ ಬಳಿಯಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದು ಜಿ.ಕೆ. ಗಾರ್ಡನ್‌ ಬಳಿ ತಡೆದಾಗ ಕಾರಿನಲ್ಲಿದ್ದ ಇಬ್ಬರು ಗೋವು ಕಳ್ಳರು ಕಾರನ್ನು ಮತ್ತು ಮೊಬೈಲ್‌ ಗಳನ್ನು ಬಿಟ್ಟು ಪರಾರಿಯಾದರು ಎಂದು ತಿಳಿದುಬಂದಿದೆ.

ಕಾರಿನೊಳಗೆ ದನಗಳನ್ನು ಯದ್ವಾತದ್ವಾ ಕಟ್ಟಿಹಾಕಿ ಒತ್ತಡದಲ್ಲಿ ತುಂಬಿಸಿರುವುದು ಕಂಡುಬಂದಿದ್ದು, ಮೊಬೈಲ್‌ ಸಿಕ್ಕಿರುವುದರಿಂದ ಗೋವು ಕಳ್ಳರ ಪತ್ತೆ ಸಲೀಸಾಗಿ ಆಗಬಹುದೆಂಬ ನಿರೀಕ್ಷೆ ಇದೆ.

ಮೂಡುಬಿದಿರೆಯ ಪೊಲೀಸ್‌ ಉಪನಿರೀಕ್ಷಕ ಸಿದ್ದಪ್ಪ ಅವರ ಕಾರ್ಯಾಚರಣೆಯಲ್ಲಿ ಬಜರಂಗ ದಳದ ತಾಲೂಕು ಸಂಚಾಲಕ ಅಭಿಲಾಷ್‌ ಸಹಿತ ಕಾರ್ಯಕರ್ತರು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next