Advertisement

ಗಾಣಿಗರ ‘ಆಟಿಡ್‌ ಕೆಸರ್ಡೊಂಜಿ ದಿನ’ದ ಗಮ್ಮತ್ತು

12:52 PM Aug 06, 2018 | |

ಮೂಡಬಿದಿರೆ : ಕರಿಂಜೆಯ ಗುರುಬೆಟ್ಟು ರವಿ ಅವರ ಕೆಸರಿನ ಗದ್ದೆಯಲ್ಲಿ ರವಿವಾರ ಮೂಡಬಿದಿರೆಯ ಸಪಲಿಗರ ಯಾನೆ ಗಾಣಿಗರ ಸಂಘ, ಗಾಣಿಗರ ಯುವ ವೇದಿಕೆ ಮತ್ತು ಮಹಿಳಾ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ 8ನೇ ವರ್ಷದ ‘ಆಟಿಡ್‌ ಕೆಸರ್ಡೊಂಜಿ  ದಿನ’ದ ಗಮ್ಮತ್ತು ನಡೆಯಿತು.

Advertisement

ಪುಟಾಣಿಗಳಿಂದ ತೊಡಗಿ ಯುವ ಜನರು, ಪುರುಷರು, ಮಹಿಳೆಯರೆನ್ನದೆ ವಿವಿಧ ವಯೋಮಾನದವರು ತಮ್ಮ ವಯಸ್ಸಿನ ಮಿತಿಗಳನ್ನು ಮರೆತು ಖುಷಿಯಿಂದ ಕೆಸರಿನ ಗದ್ದೆಯಲ್ಲಿ ವಿವಿಧ ಅಟೋಟಗಳಲ್ಲಿ ಪಾಲ್ಗೊಂಡು ಕೆಸರಲ್ಲಿ ಮಿಂದೆದ್ದು ಕುಣಿದಾಡಿದರು. ಮುಂಜಾನೆ ತುಳು ಸಂಸ್ಕೃತಿ ಸಂಬಂಧಿತ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಪ್ರತಾಪ್‌ ಬೆಟ್ಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂಡಬಿದಿರೆ ಪೊಲೀಸ್‌ ಉಪನಿರೀಕ್ಷಕ (ಕ್ರೈಂ ವಿಭಾಗ) ಶಂಕರ ನಾೖರಿ ಉದ್ಘಾಟಿಸಿದರು. ಗಾಣಿಗರ ಯುವ ಒಕ್ಕೂಟದ ಅಧ್ಯಕ್ಷ ಪ್ರಶಾಂತ್‌ ಬಾರಾಡಿ ಓಟದ ಕೋಣ ಓಡಿಸುವ ಮೂಲಕ ಕೆಸರಿನ ಗದ್ದೆಯ ಕ್ರೀಡಾಕೂಟಗಳಿಗೆ ಚಾಲನೆ ನೀಡಿದರು.

ವಲಯ ರೈತ ಸಂಘದ ಅಧ್ಯಕ್ಷ ಹಂಡೇಲುಗುತ್ತು ಎಚ್‌. ಧನಕೀರ್ತಿ ಅವರು ತುಳು ನಾಡಿನ ಪರಂಪರೆ, ಸಂಪ್ರದಾಯಗಳು, ಆಟಿ ತಿಂಗಳ ಕಷ್ಟ, ಅಳಿಯ ಕಟ್ಟು ಮೊದಲಾದ ವಿಚಾರಗಳಲ್ಲಿ ಸವಿವರ ಮಾಹಿತಿ ನೀಡಿದರು. ಉದ್ಯಮಿ ನವೀನ್‌ ಸುವರ್ಣ, ಕರಿಂಜೆ ಕುಕ್ಕಟ್ಟೆಗುತ್ತು ಯಶವಂತ ಶೆಟ್ಟಿ ಶುಭಾಶಂಸನೆಗೈದರು.

ಸಂಘದ ಗೌರವಾಧ್ಯಕ್ಷ ಸದಾಶಿವ ಬಂಗೇರ, ಕೇಶವ ಪೊಳಲಿ, ಕಾರ್ಯದರ್ಶಿ ರಾಜೇಶ್‌ ಬಂಗೇರ, ಕ್ರೀಡಾ ಕಾರ್ಯದರ್ಶಿ ಲತೀಶ್‌ ಕರ್ಕೇರಾ, ಮಹಿಳಾ ವೇದಿಕೆಯ ಅಧ್ಯಕ್ಷೆ ಸಂಧ್ಯಾ ಸಂದೀಪ್‌, ಪ್ರಾಯೋಜಕರಾದ ಮುರಳೀ ದಾಸ್‌ ಕಾವೂರು, ಗಾಣಿಗೆರ್ನ ಜವನೆರ್‌ ಬಾರಾಡಿಯ ಸದಸ್ಯರು ಉಪಸ್ಥಿತರಿದ್ದರು. ಆಟಿಯ ತಿನಿಸುಗಳ ವೈವಿಧ್ಯದೊಂದಿಗೆ ಊಟೋಪಚಾರ ನಡೆಯಿತು.

Advertisement

ಸಂಜೆ ನಡೆದ ಸಮಾರೋಪದಲ್ಲಿ ಜೀವನ್‌ ಬಂಗೇರ, ರವೀಂದ್ರ ಕೈಕಂಬ, ಸೇಸಪ್ಪ ಸಾಲ್ಯಾನ್‌ ಮಂಜೇಶ್ವರ ಬಹುಮಾನ ವಿತರಿಸಿದರು. ತಿನಿಸುಗಳನ್ನು ತಯಾರಿಸಿಕೊಂಡು ಪಾಲ್ಗೊಂಡವರಿಗೆ ಸ್ಮರಣಿಕೆ ನೀಡಲಾಯಿತು. ಉಪಾಧ್ಯಕ್ಷ ಜಗನ್ನಾಥ ಸಪಲಿಗ, ಸಹಕಾರ್ಯದರ್ಶಿ ಕೇಶವ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಗಳು
ಕೆಸರುಗದ್ದೆಯ ಅಂಕಣದಲ್ಲೇ ವಾಲಿಬಾಲ್‌, ತ್ರೋಬಾಲ್‌, ನಿಧಿ ಶೋಧ, ಹಗ್ಗ ಜಗ್ಗಾಟ, ಮಕ್ಕಳಿಗೆ ರಿಲೇ ಮತ್ತು ಇತರ ಓಟ, ಆಟಗಳು ನಡೆಯಿತು. ವಿಶೇಷ ಆಕರ್ಷಣೆಯಾಗಿ ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಅಡಿಕೆ ಹಾಳೆಯಲ್ಲಿ ಕೆಸರಲ್ಲೇ ಎಳೆದುಕೊಂಡು ಗುರಿ ತಲುಪಲು ಹರಸಾಹಸಪಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next