Advertisement

ಸದ್ಯ ಮುಂಗಾರು ದುರ್ಬಲ: ಮಾಸಾಂತ್ಯಕ್ಕೆ ಚೇತರಿಕೆ ಸಾಧ್ಯತೆ

01:28 AM Jun 18, 2024 | Team Udayavani |

ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ದುರ್ಬ ಲ ವಾಗಿದೆ. ಮಾಸಾಂತ್ಯಕ್ಕೆ ಮುಂಗಾರು ಮಾರು ತಗಳು ಮತ್ತೆ ಬಿರುಸಾಗುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ. ಉತ್ತರ ಭಾಗದಲ್ಲಿ ಮುಂಗಾರು ಜೂ.11ರ ಬಳಿಕ ಹೆಚ್ಚೇನು ಪ್ರಭಾವ ಬೀರಿಲ್ಲ. ಮುಂಗಾರು ಉತ್ತರಕ್ಕೆ ನವಸಾರಿ, ಜಲ್ಗಾಂವ್‌, ಅಮರಾವತಿ, ಚಂದ್ರಾಪುರ, ಬಿಜಾಪುರ, ಸುಕಾ¾, ಮಾಲ್ಕಂಗಿರಿ, ವಿಜಯ ನಗರಂ, ಹಾಗೂ ಇಸ್ಲಾಂಪುರ ಮೂಲಕ ಮುಂದುವರಿ ಯು ತ್ತದೆ. ದೇಶದಲ್ಲಿ ಜೂ.01ರಿಂದ ಶೇ.20ರಷ್ಟು ಮಳೆ ಕೊರತೆ ಉಂಟಾಗಿದ್ದು, ವಾಯುವ್ಯ ಭಾರತದಲ್ಲಿ ಶೇ.68ರಷ್ಟು, ಮಧ್ಯಭಾರತದಲ್ಲಿ ಶೇ.29ರಷ್ಟು, ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ ಶೇ.20ರಷ್ಟು ಮತ್ತು ದಕ್ಷಿಣದಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next