Advertisement

17 ದಿನ ಮುಂಚಿತವಾಗಿಯೇ ದೇಶ ವ್ಯಾಪಿಸಿದ ಮುಂಗಾರು

06:00 AM Jun 30, 2018 | Team Udayavani |

ನವದೆಹಲಿ: ಸಾಮಾನ್ಯಕ್ಕಿಂತ 17 ದಿನಗಳ ಮುಂಚಿತವಾಗಿಯೇ ಮುಂಗಾರು ಮಳೆಯು ದೇಶವನ್ನು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ಪಶ್ಚಿಮ ರಾಜಸ್ಥಾನದ ಶ್ರೀಗಂಗಾನಗರವು ಮುಂಗಾರು ಪ್ರವೇಶದ ಕೊನೆಯ ತಾಣವಾಗಿದ್ದು, ಇಲ್ಲಿ ಜುಲೈ 15ರಂದು ಮುಂಗಾರು ಮಾರುತ ಪ್ರವೇಶಿಸಬೇಕಾಗಿತ್ತು. ಆದರೆ, 17 ದಿನಗಳ ಮುಂಚೆಯೇ ಅಂದರೆ ಶುಕ್ರವಾರವೇ ಇಲ್ಲಿಗೆ ಮುಂಗಾರಿನ ಆಗಮನವಾಗಿದೆ. ಹೀಗಾಗಿ, ಪ್ರಸಕ್ತ ಸಾಲಿನ ಮುಂಗಾರು ಈಗಲೇ ಇಡೀ ದೇಶವನ್ನು ವ್ಯಾಪಿಸಿದಂತಾಗಿದೆ ಎಂದು ಇಲಾಖೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಮೃತ್ಯುಂಜಯ್‌ ಮೊಹಾಪಾತ್ರ ತಿಳಿಸಿದ್ದಾರೆ.

Advertisement

ಸಾಮಾನ್ಯವಾಗಿ ಜುಲೈ 1ರ ವೇಳೆಗೆ ಮುಂಗಾರು ಇಡೀ ದೇಶವನ್ನು ವ್ಯಾಪಿಸುತ್ತದೆ. ಆದರೆ, ಪಶ್ಚಿಮ ರಾಜಸ್ಥಾನಕ್ಕೆ ಮಾತ್ರ ವಿಳಂಬವಾಗಿ ಪ್ರವೇಶಿಸುತ್ತದೆ. ಆದರೆ, ಈ ಬಾರಿ ಇದು ಬದಲಾಗಿದ್ದು, ಜು.1ರಂದೇ ಎಲ್ಲೆಡೆಯೂ ಮುಂ ಗಾರು ಪಸರಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ವಾರದ ಆರಂಭದಲ್ಲಿ ದೇಶಾದ್ಯಂತ ಮಳೆ ಕೊರತೆ ಪ್ರಮಾಣ ಶೇ.10ರಷ್ಟಿತ್ತು. ಶುಕ್ರವಾರದ ವೇಳೆಗೆ ಅದು ಶೇ.6ಕ್ಕಿಳಿದಿದೆ ಎಂದೂ ಇಲಾಖೆ ಮಾಹಿತಿ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next