Advertisement

ಬೆಳ್ತಂಗಡಿ ತಾಲೂಕಿನ ಬಂದಾರು ವ್ಯಾಪ್ತಿಯಲ್ಲಿ ಮಂಗಗಳ ಮಾರಣ ಹೋಮ

04:50 PM May 15, 2020 | sudhir |

ಬೆಳ್ತಂಗಡಿ: ಕೋವಿಡ್ ಆತಂಕದ ನಡುವೆಯೇ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋತಿಗಳ ಮಾರಣ ಹೋಮ ನಡೆದಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ

Advertisement

ಬಂದಾರು ಗ್ರಾಮದ ಕುಂಟಾಲಪಲ್ಕೆ- ಪದ್ಮುಂಜ ರಸ್ತೆಯಾಗಿ ಸಾಗುವ ಮಾರ್ಗ ಸಮೀಪ ಸುಮಾರು 50 ಕ್ಕೂ ಅಧಿಕ ಮಂಗಗಳ ಮೃತದೇಹ ಪತ್ತೆಯಾಗಿದೆ.

ಗುರುವಾರ ರಾತ್ರಿ 8.30 ಕ್ಕೆ ಮಂಗಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದು ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಕಣಿಯೂರು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಸ್ವತಂತ್ರ ರಾವ್ ಹಾಗೂ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ, ಸಿಬಂದಿ, ಅರಣ್ಯ ಇಲಾಖೆ, ಪಶುವೈದ್ಯಕೀಯ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಮಂಗಗಳ ತಲೆಗೆ ಗಾಯವಾಗಿದ್ದು, ಮೇಲ್ನೋಟಕ್ಕೆ ವಿಷ ಪದಾರ್ಥ ನೀಡಿ ಸಾಯಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ನಿನ್ನೆ 50 ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದ ಸ್ಥಿತಿಯಲ್ಲಿದ್ದು, ಇಂದು 15 ಮಂಗಗಳ ಮೃತದೇಹ ಪತ್ತೆಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿದೆ.

ಮೃತದೇಹದ ಮಾದರಿಯನ್ನು ಮಂಗಳೂರು ಪಶುವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಆಹಾರವಿಲ್ಲದೆ ಚಾರ್ಮಾಡಿ ಸಮೀಪ ವಾನರಗಳು ರೋಧಿಸುತ್ತಿದ್ದ ಸುದ್ದಿ ಎಲ್ಲೆಡೆ ಗಮನ ಸೆಳೆದಿತ್ತು. ಇದೀಗ ಕೃಷಿ ಪ್ರದೇಶಕ್ಕೆ ಹಾನಿ ಮಾಡಿರುವುದರಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಬೇರೆಡೆಯಿಂದ ಮಂಗಗಳನ್ನು ಕೊಂದು ಮೃತದೇಹ ಬಂದಾರು ವ್ಯಾಪ್ತಿಯಲ್ಲಿ ಎಸೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next