Advertisement

Seized: ದಾಖಲೆ ಇಲ್ಲದೆ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದ 4.9 ಲಕ್ಷ ರೂ. ವಶಕ್ಕೆ

10:28 AM Mar 26, 2024 | Team Udayavani |

ಧಾರವಾಡ: ಯಾವುದೇ ದಾಖಲಾತಿ ಇಲ್ಲದೇ ಸಾರಿಗೆ ಸಂಸ್ಥೆ ಬಸ್‌ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದ್ದ 4,97,600 ರೂಪಾಯಿಗಳನ್ನು ತೇಗೂರು ಚೆಕ್‌ ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ನಿಪ್ಪಾಣಿಯಿಂದ ಭದ್ರಾವತಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಚಿಕ್ಕಮಗಳೂರಿನ ಮಶೋದ್ ಎಂಬ ವ್ಯಕ್ತಿ ಪ್ರಯಾಣಿಸುತ್ತಿದ್ದ. ಈ ಬಸ್ಸನ್ನು ತೇಗೂರು ಚೆಕ್‌ ಪೋಸ್ಟ್ ಬಳಿ ತಪಾಸಣೆ ನಡೆಸಲಾಯಿತು. ಆಗ ಮಶೋದ್‌ ಎಂಬಾತನ ಬ್ಯಾಗ್ ಚೆಕ್ ಮಾಡಿದಾಗ ಅದರಲ್ಲಿ 4,97,600 ರೂಪಾಯಿ ಇದ್ದದ್ದು ಕಂಡು
ಆತ ಬೆಳಗಾವಿ ಮತ್ತು ನಿಪ್ಪಾಣಿಗೆ ಟಿಂಬ‌ರ್ ಪೂರೈಕೆ ಮಾಡಿದ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.

ಆದರೆ ಅದಕ್ಕೆ ಯಾವುದೇ ದಾಖಲಾತಿಯನ್ನು ಆತ ಪೂರೈಸದೇ ಇರುವುದರಿಂದ ಚುನಾವಣಾಧಿಕಾರಿಗಳು ಆ ಹಣವನ್ನು ತಮ್ಮ ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹದಗೆಟ್ಟ ಅರೋಗ್ಯ: ಮುಖ್ತಾರ್ ಅನ್ಸಾರಿ ಆಸ್ಪತ್ರೆಗೆ ದಾಖಲು, ಐಸಿಯು ನಲ್ಲಿ ಚಿಕಿತ್ಸೆ

Advertisement

Udayavani is now on Telegram. Click here to join our channel and stay updated with the latest news.

Next