Advertisement

ಮ.ಪ್ರ. ಬಿಜೆಪಿ ನಾಯಕನ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ

03:47 PM Feb 19, 2018 | udayavani editorial |

ಭೋಪಾಲ್‌ : ಆ್ಯಸಿಡ್‌ ಅಟ್ಯಾಕ್‌ನಲ್ಲಿ ಬದುಕುಳಿದ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಇಂದು ಬಿಜೆಪಿ ನಾಯಕನ (ಸರಕಾರಿ ಸಂಸ್ಥೆಯೊಂದರ ಉಪಾಧ್ಯಕ್ಷನಾಗಿರುವ ಈತನಿಗೆ ಸಹಾಯಕ ಸಚಿವ ಮಟ್ಟದ ಸ್ಥಾನಮಾನವಿದೆ) ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಬಿಜೆಪಿ ಸರಕಾರ, ಮಧ್ಯಪ್ರದೇಶ ರಾಜ್ಯ ಸಿಲಾಯಿ ಕಲಾ ಮಂಡಲದ ಉಪಾಧ್ಯಕ್ಷನಾಗಿರುವ ರಾಜೇಂದ್ರ ನಾಮದೇವ್‌ನನ್ನು ಹುದ್ದೆಯಿಂದ ಕಿತ್ತು ಹಾಕಿದೆ. 

ರಾಜ್ಯ ಬಿಜೆಪಿ ಅಧ್ಯಕ್ಷ ನಂದಕುಮಾರ್‌ ಸಿಂಗ್‌ ಚೌಹಾಣ್‌ ಅವರು ನಾಮದೇವ್‌ ನನ್ನು ಆರು ತಿಂಗಳ ಅವಧಿಗೆ ಪಕ್ಷದಿಂದ ಅಮಾನತು ಮಾಡಿದರು. 

ಸಾತ್ನಾ ಜಿಲ್ಲೆಯ ಮೈಹಾರ್‌ ನಿವಾಸಿಯಾಗಿರುವ ನಾಮದೇವ್‌ ವಿರುದ್ಧ ಹನುಮಾನ್‌ಗಂಜ್‌ ಪೊಲೀಸ್‌ ಠಾಣೆ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next