Advertisement

ಪಡಿತರ ಕಾರ್ಡ್‌ ನೀಡಲು ಮಹಿಳೆಯರ ಮನವಿ

05:39 PM Apr 23, 2020 | Naveen |

ಮೊಳಕಾಲ್ಮೂರು: ಪಟ್ಟಣದ ಕನಕಯ್ಯನಹಟ್ಟಿಯಲ್ಲಿ ಪಡಿತರ ಆಹಾರ ಧಾನ್ಯಗಳಿಗಾಗಿ ಪಡಿತರ ಕಾರ್ಡ್‌ ಸೌಲಭ್ಯ ಕಲ್ಪಿಸಬೇಕೆಂದು ಪಡಿತರ ಕಾರ್ಡ್‌ ಇಲ್ಲದ ಮಹಿಳೆಯರು ವಿಪತ್ತು ನಿರ್ವಹಣಾ ಸಿಬ್ಬಂದಿಯಲ್ಲಿ ಮನವಿ ಮಾಡಿಕೊಂಡರು.

Advertisement

ಕನಕಯ್ಯನಹಟ್ಟಿಯ ಪಡಿತರ ಕಾರ್ಡ್‌ ವಂಚಿತ ಮಹಿಳೆ ಶಕುಂತಲಮ್ಮ ಮತ್ತು ಕವಿತಾ ಮಾತನಾಡಿ, ಈ ಬಡಾವಣೆಯಲ್ಲಿ ನೆಲೆಸಿ ಸುಮಾರು 2 ವರ್ಷಗಳಾಗಿವೆ. ಇದುವರೆಗೂ ಪಡಿತರ ಕಾರ್ಡ್‌ ಸೌಲಭ್ಯವಿಲ್ಲದೆ ನಮ್ಮ ಕುಟುಂಬ ಜೀವನ ಸಾಗಿಸುತ್ತಿದೆ. ಪಡಿತರ ಕಾರ್ಡ್‌ ಗಾಗಿ ಕಚೇರಿಗೆ ಅಲೆದಾಡಿದರೂ ಪಡಿತರ ಕಾರ್ಡ್‌ ಸೌಲಭ್ಯ ಸಿಗದೆ ಪಡಿತರ ಆಹಾರ ಧಾನ್ಯಗಳ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಕೂಲಿ ಕೆಲಸದಿಂದ ಜೀವನ ಸಾಗಿಸಲಾಗುತ್ತಿದ್ದು, ಕೋವಿಡ್ ವೈರಸ್‌ ಭೀತಿಯಿಂದ ಕೂಲಿ ಕೆಲಸವಿಲ್ಲದೆ ಕುಟುಂಬದ ನಿರ್ವಹಣೆಯೂ ಕಷ್ಟವಾಗಿದೆ. ಹಾಗಾಗಿ ನಮ್ಮ ಕುಟುಂಬಗಳ ಜೀವನ ನಿರ್ವಹಣೆಗಾಗಿ ಪಡಿತರ ಕಾರ್ಡ್‌ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಡಿಕೊಂಡರು. ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಸಿಬ್ಬಂದಿ ಟಿ.ಎಂ.ಅಶೋಕ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next