Advertisement

ಬಾಂಡ್ರಾವಿ ದೇಗುಲದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದ್ದ ಯತಿವರ್ಯರು

06:04 PM Dec 30, 2019 | Naveen |

ಮೊಳಕಾಲ್ಮೂರು: ಹರಿಪಾದ ಸೇರಿದ ಪೇಜಾವರ ಅದೋಕ್ಷಜ ಮಠದ ವಿಶ್ವೇಶತೀರ್ಥ ಶ್ರೀಪಾದರು ತಾಲೂಕಿನ ಬಾಂಡ್ರಾವಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಂಸ್ಥಾನ ಪೂಜಾ ಕಾರ್ಯ ನೆರವೇರಿಸಿದ್ದರು.

Advertisement

ಕಳೆದ ವರ್ಷ ಪೇಜಾವರ ಶ್ರೀಗಳು ರಾಯಚೂರಿನಿಂದ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಶ್ರೀ ವ್ಯಾಸರಾಯರು ಬಾಂಡ್ರಾವಿಯಲ್ಲಿ ಪ್ರತಿಷ್ಠಾಪಿರುವ ಶ್ರೀ ಬಾಂಡ್ರಾವಿ ಆಂಜನೇಯಸ್ವಾಮಿ ದೇವಸ್ಥಾನವನ್ನು ನೆನಪಿಸಿಕೊಂಡು ಗ್ರಾಮಕ್ಕೆ ಭೇಟಿ ನೀಡಿದ್ದರು.

ಈ ಗ್ರಾಮದಲ್ಲಿ ಶತಮಾನಗಳ ಹಿಂದೆ ವ್ಯಾಸರಾಯರು ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರು. ಪೇಜಾವರ ಶ್ರೀಗಳು ಭಕ್ತಿ ಭಾವದೊಂದಿಗೆ ಸಂಸ್ಥಾನ ಪೂಜೆ ನೆರವೇರಿಸಿದ್ದರು. ಸ್ವಾಮೀಜಿಯವರ ಆಗಮನವಾಗುತ್ತಿದ್ದಂತೆಯೇ ತಾಲೂಕಿನ ಭಕ್ತರು ಬಾಂಡ್ರಾವಿಗೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದ ಸ್ವಾಮೀಜಿ ಭಕ್ತರನ್ನು ಹರಸಿ ಬೆಂಗಳೂರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಕರ್ಣಂ ಗಿರೀಶ್‌, ದಿ| ಕೃಷ್ಣಮೂರ್ತಿ, ಗಿರೀಶ್‌, ಅನಿಲ್‌ಕುಮಾರ್‌ ಜೋಡೊದಾರ್‌, ಜಗನ್ಮೋಹನ, ಲಕ್ಷ್ಮೀಪತಿ, ಗೋಪಿನಾಥ, ಮಾರುತಿ ಮತ್ತಿತರರು ಇದ್ದರು ಎಂದು ಬಾಂಡ್ರಾವಿ ಗ್ರಾಮಸ್ಥರು ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next