Advertisement

ಪರಿಸರ ದಿನಾಚರಣೆಗೆ ಚಾಲನೆ

06:45 PM Jun 07, 2020 | Team Udayavani |

ಮೊಳಕಾಲ್ಮೂರು: ಪರಿಸರದಿಂದಲೇ ಪ್ರತಿಯೊಂದು ಜೀವ ಸಂಕುಲ ಜೀವಿಸಲು ಸಾಧ್ಯ. ಆದರಿಂದ ಗಿಡ ಮರಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಿಸಬೇಕೆಂದು ಜೆ.ಎಂ.ಎಫ್‌.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌.ನಿರ್ಮಲ ತಿಳಿಸಿದರು.

Advertisement

ಪಟ್ಟಣದ ಜೆ.ಎಂ.ಎಫ್‌.ಸಿ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ ಹಾಗೂ ಅರಣ್ಯ ಇಲಾಖೆ ಮೊಳಕಾಲ್ಮೂರು ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ತಿಪ್ಪೇಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಪಾಪಯ್ಯ, ಕಾರ್ಯದರ್ಶಿ ಮಂಜುನಾಥ, ವಲಯಾರಣ್ಯಾ ಕಾರಿ ನಾಗೇಂದ್ರ ನಾಯಕ, ಸಾಮಾಜಿಕ ಅರಣ್ಯಾಧಿಕಾರಿ ರಾಮಪ್ಪ ಪೂಜಾರಿ, ಉಪ ವಲಯಾರಣ್ಯಾಧಿಕಾರಿ ಹಸನ್‌ ಬಾಷಾ, ಚಾಂದ್‌ ಬಾಷಾ, ವಕೀಲರಾದ ಪಿ.ಜಿ.ವಸಂತಕುಮಾರ್‌, ಎಂ.ಎನ್‌.ವಿಜಯಲಕ್ಷ್ಮೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next