Advertisement
ಇಸ್ಲಾಮಿನ ನಾಲ್ಕನೇ ಖಲೀಫರಾಗಿದ್ದ ಹಝರತ್ ಅಲಿ ಅವರು ಖೀಲಾಫತನ್ನು ನಿರ್ವಹಿಸಿದ ಅನಂತರ, ಐದನೇ ಖಲೀಫರಾಗಿ ಅಮೀರ್ ಮುಅವಿಯಾರವರು ಆಯ್ಕೆಯಾದರು. ಅಮೀರ್ ಮುಅವಿಯಾರವರು ಮರಣಿಸಿದ ಬಳಿಕ ನಾಯಕತ್ವದ ಯಾವ ಅರ್ಹತೆಯೂ ಇಲ್ಲದ ಅವರ ಪುತ್ರ ದುಷ್ಟ ಯಝೀದನು ಸರ್ವಾಧಿಕಾರಿಯಾದನು. ಆದರೆ ಹಝರತ್ ಅಲಿಯವರ ಸುಪುತ್ರ, ಇಮಾಂ ಹುಸೇನರಿಗೆ ಕೂಫಾದ ನಾಯಕತ್ವ ದೊರೆಯಬೇಕಿತ್ತು. ಹಝರತ್ ಇಮಾಂ ಹುಸೇನರು ಮಾತ್ರ ಆಧ್ಯಾತ್ಮಿಕ ವಿಚಾರಗಳಲ್ಲಿಯೇ ತಲ್ಲೀನರಾಗಿ ಕಾಲ ಕಳೆಯುತ್ತಿದ್ದರು. ಅಧಿಕಾರದ ಲಾಲಸೆ ಅವರಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಆದರೆ ಇಸ್ಲಾಮೀ ದೇಶದ ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡ ದುಷ್ಟ ಯಝೀದನು ಅಧಿಕಾರ ದಾಹದಿಂದ ಧರ್ಮ, ನ್ಯಾಯ, ನೀಡಿ ಇವುಗಳನ್ನೆಲ್ಲಾ ಮರೆತು ತನ್ನ ಇಚ್ಛಾನುಸಾರವಾಗಿ, ಇಸ್ಲಾಮಿನ ಉನ್ನತ ಮೌಲ್ಯಗಳ ವಿರುದ್ಧವಾಗಿಯೇ ರಾಜ್ಯಭಾರವನ್ನು ನಿರ್ವಹಿಸುತ್ತಿದ್ದನು.
ಹಿಜರೀ ಶಕ ಅರುವತ್ತೂಂದರ ಮೊಹರಂ ತಿಂಗಳ ಹತ್ತರಂದು ಇರಾಕ್ ದೇಶದ ಯುಪ್ರಟಿಸ್ ನದೀ ತೀರದ ಕರ್ಬಲಾ ಮೈದಾನದಲ್ಲಿ ಯುಝೀದನ ಅಸಂಖ್ಯಾತ ಸೈನಿಕರನ್ನು ಹಝರತ್ ಇಮಾಂ ಹುಸೇನರು ಕೇವಲ ತನ್ನ ಎಪ್ಪತ್ತೆರಡು ಮಂದಿ ಅನುಯಾಯಿಗಳ ಜತೆಗೆ ಎದುರಿಸಿದರು. ಇದು ಹಝರತ್ ಇಮಾಂ ಹುಸೇನರು ಅನ್ಯಾಯದ ವಿರುದ್ಧ ನಡೆಸಿದ ಭೀಕರ ಹೋರಾಟವಾಗಿತ್ತು. ಈ ಕದನದಲ್ಲಿ ಸೋಲು ತನ್ನ ಪಾಲಿಗೆ ಖಚಿತವೆಂದು ಇಮಾಂ ಹುಸೇನರು ಭಾವಿಸಿದ್ದರೂ ಅದು ಸತ್ಯ, ನ್ಯಾಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಸಿದ ಅಪೂರ್ವ ಕದನವಾಗಿತ್ತು. ಹಝರತ್ ಇಮಾಂ ಹುಸೇನರು ಕರ್ಬಲಾ ರಣಾಂಗಣದಲ್ಲಿ, ವೀರಾವೇಶದಿಂದ ಹೋರಾಡಿ ಮೊಹರಂ ಹತ್ತರಂದು ಹುತಾತ್ಮರಾದರು. ಹಝರತ್ ಇಮಾಂ ಹುಸೇನರು ಇಸ್ಲಾಮಿನ ಉನ್ನತ ಮೌಲ್ಯಗಳ ಸಂಸ್ಥಾಪನೆಗಾಗಿ ವೀರಾವೇಶದ ಹೋರಾಟದ ಮೂಲಕ ಅಮರ ಜ್ಯೋತಿಯೊಂದನ್ನು ಹೊತ್ತಿಸಿ ಹೋದರು. ಅವರು ಹುತಾತ್ಮರಾಗಿ ಇಂದು ಸಾವಿರದ ನಾನ್ನೂರು ವರ್ಷಗಳು ಸಂದರೂ ಆ ಜ್ಯೋತಿಯು ಇನ್ನೂ ನಂದದೇ ಅಮರವಾಗಿಯೇ ಉಳಿದಿದೆ.
Related Articles
ಗಳನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ. ಒಟ್ಟಿನಲ್ಲಿ ಮೊಹರಂನ ಇತಿಹಾಸವು ಸ್ವಾತಂತ್ರ್ಯ ಹಾಗೂ ಸಮಾನತೆಯ ಪ್ರೇಮಿಗಳಿಗೆ ಸ್ಫೂರ್ತಿದಾಯಕವಾಗಿದೆ.
Advertisement
ಹಝರತ್ ಇಮಾಂ ಹುಸೇನರು ತನ್ನ ಬದುಕಿನುದ್ದಕ್ಕೂ ತೋರಿದ ಅಪೂರ್ವ ತ್ಯಾಗದ ಸ್ಫೂರ್ತಿಯು, ಮಾನವ ಬದುಕಿಗೆ ಇಂದು ಅಗತ್ಯವಾಗಿದೆ. ಸತ್ಯ ಹಾಗೂ ನ್ಯಾಯವನ್ನು ಬೆಂಬಲಿಸಿ, ಅಸತ್ಯ ಹಾಗೂ ಅನ್ಯಾಯವನ್ನು ವಿರೋಧಿಸಿ, ಸಮಾಜದಲ್ಲಿ ಪ್ರಾಮಾಣಿಕವಾಗಿ ಜೀವಿಸುವುದೇ ಬದುಕಿನ ಗುರಿ. ಸಾಮಾಜಿಕ ಹಿತಾಸಕ್ತಿಗಾಗಿ ಮಾಡುವ ತ್ಯಾಗವು, ಮನುಷ್ಯನಿಗೆ ಜೀವನದಲ್ಲಿ, ಸುಭಿಕ್ಷೆಯನ್ನೂ ನೆಮ್ಮದಿಯನ್ನೂ, ಆತ್ಮಸಂತೃಪ್ತಿಯನ್ನೂ ನೀಡಬಲ್ಲದು. ಮೊಹರಂ ತನ್ನ ವಿಶಾಲ ಅರ್ಥದಲ್ಲಿ ಸತ್ಯ, ನ್ಯಾಯ ಮತ್ತು ಸ್ವಾತಂತ್ರ್ಯ ಪ್ರೇಮದ ಉನ್ನತ ಆದರ್ಶಗಳನ್ನು ಮನುಕುಲಕ್ಕೆ ಸಾರುತ್ತದೆ. ಸತ್ಯ, ನ್ಯಾಯ ಮತ್ತು ಧರ್ಮದ ಉದಾತ್ತ ಆದರ್ಶಗಳನ್ನು ನಾವು ನಿತ್ಯದ ಬದುಕಿನಲ್ಲಿ ರೂಢಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಮತ್ತು ಅರ್ಥಪೂರ್ಣವಾಗುತ್ತದೆ. ಹಝರತ್ ಇಮಾಂ ಹುಸೇನರು ಸ್ವಾಭಿಮಾನವನ್ನೂ, ಉನ್ನತ ಆದರ್ಶಗಳನ್ನೂ ಬದುಕಿನಲ್ಲಿ ರೂಢಿಸಿಕೊಂಡಿದ್ದರು. ಆ ಆದರ್ಶಗಳಿಗಾಗಿಯೇ ಅವರು ಜೀವಿಸಿದರು, ಹೋರಾಡಿದರು ಮತ್ತು ಕರ್ಬಲಾ ರಣಾಂಗಣದಲ್ಲಿ ಹುತಾತ್ಮರಾಗಿ ವೀರ ಮರಣವನ್ನಪ್ಪಿದರು. ಹಝರತ್ ಇಮಾಂ ಹುಸೇನರ ಆದರ್ಶ ಜೀವನ ಮತ್ತು ಸ್ವಾಭಿಮಾನದ ಪ್ರತಿಷ್ಠೆಯು ಮಾನವ ಜೀವನಕ್ಕೆ ಸದಾ ಮಾರ್ಗದರ್ಶನ ನೀಡಬಲ್ಲದು. * ಕೆ.ಪಿ. ಅಬ್ದುಲ್ ಖಾದರ್, ಕುತ್ತೆತ್ತೂರು