Advertisement

ಕೂದಲೆಳೆ ಅಂತರದಲ್ಲಿ  ಭಾಗವತ್‌ ಪಾರು

09:50 AM Oct 07, 2017 | Team Udayavani |

ಹೊಸದಿಲ್ಲಿ: ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಕಾರು ತಮ್ಮದೇ ಬೆಂಗಾವಲು ವಾಹನವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್‌ ಭಾಗವತ್‌ ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಬೆಂಗಾವಲು ವಾಹನದ ಟೈರು ಸ್ಫೋಟಗೊಂಡದ್ದೇ ಘಟನೆಗೆ ಕಾರಣ. ಬಳಿಕ ಭಾಗವತ್‌ಜಿ ಪ್ರಯಾಣ ಮುಂದುವರಿಸಿದರು ಎಂದು ಸಂಘ ಪ್ರಚಾರ ಪ್ರಮುಖರಾದ ಮನಮೋಹನ್‌ ವೈದ್ಯ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next