Advertisement

ಮೋದಿ ಗೆಲುವಿಗೆ ರಂಭಾಪುರಿ ಶ್ರೀ ಹರ್ಷ

12:29 AM May 25, 2019 | Lakshmi GovindaRaj |

ಬಾಳೆಹೊನ್ನೂರು: ಬಿಜೆಪಿ ನೇತೃತ್ವದ ಎನ್‌ಡಿಎ 352 ಸ್ಥಾನ ಗೆದ್ದು ದಿಗ್ವಿಜಯ ಸಾಧಿ ಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸುಭದ್ರ ಸಶಕ್ತ ಭಾರತ ನಿರ್ಮಾಣ ಮತ್ತು ಜನಹಿತ ಯೋಜನೆಗಳೇ ಕಾರಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಆರೋಗ್ಯ, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕೈಗೊಂಡ ನಿರ್ಧಾರ, ಸ್ವತ್ಛ ಭಾರತ ಮೊದಲಾದ ಅನೇಕ ಯೋಜನೆಗಳನ್ನು ಕೈಗೊಂಡು ಶ್ರಮಿಸಿದ್ದನ್ನು ಮರೆಯಲಾಗದು. ಯಾರೊಂದಿಗೂ ದ್ವೇಷ, ಅಸೂಯೆ ಇಲ್ಲದ, ಸರ್ವಾಂಗೀಣ ಅಭಿವೃದ್ಧಿ ಮತ್ತು ಜನ ಕಲ್ಯಾಣದ ಮೋದಿ ಅವರ ಚಿಂತನೆಗಳು ಬಿಜೆಪಿ ಪ್ರಚಂಡ ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಎರಡನೇ ಅವಧಿಗೆ ಪ್ರಧಾನಿಯಾಗಲಿರುವ ಮೋದಿಯವರು ಸಶಕ್ತ ಭಾರತ ನಿರ್ಮಾಣ ಮಾಡುವುದರಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಬಲ್ಲರೆಂಬ ಆತ್ಮವಿಶ್ವಾಸ ನಮಗಿದೆ. ಧರ್ಮ ಮತ್ತು ಜಾತಿಗಳ ಮಧ್ಯೆ ಸಂಘರ್ಷಕ್ಕೆ ಅವಕಾಶ ಕೊಡದೆ ದೇಶದ ಪ್ರಗತಿ, ಬಡತನ ನಿರ್ಮೂಲನೆ, ಕೃಷಿ ಕ್ಷೇತ್ರ ಮತ್ತು ರೈತರ ಹಿತ ಕಾಪಾಡಲು ಮೋದಿಯವರು ಹೆಚ್ಚಿನ ಗಮನ ಹರಿಸಬೇಕೆಂದು ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next