Advertisement

Modi ಹೇಳುವುದೇ ಒಂದು, ಮಾಡೋದೊಂದು: ಸೋನಿಯಾ

01:34 AM Jun 30, 2024 | Team Udayavani |

ಹೊಸದಿಲ್ಲಿ: 18ನೇ ಲೋಕಸಭೆಯ ಮೊದಲ ಅಧಿವೇಶನವು ಆಡಳಿತ ಮತ್ತು ವಿಪಕ್ಷ ನಡುವೆ ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರು ಒಮ್ಮತದ ಮೌಲ್ಯವನ್ನು ಬೋಧಿಸಿದರೂ ಅದರಂತೆ ನಡೆದುಕೊಳ್ಳುವುದಿಲ್ಲ ಎಂದು ಟೀಕಿಸಿದ್ದಾರೆ.

Advertisement

ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಸೋನಿಯಾ ಗಾಂಧಿ, ಏನೂ ಬದಲಾವಣೆಯೇ ಆಗಿಲ್ಲ ಎಂಬಂತೆ ಮೋದಿ ವರ್ತಿಸುತ್ತಿದ್ದಾರೆ. ಅವರು ಒಮ್ಮತದ ಮೌಲ್ಯದ ಬಗ್ಗೆ ಬೋಧಿಸುತ್ತಾರೆ. ಆದರೆ ಸಂಘರ್ಷಕ್ಕೇ ಆದ್ಯತೆ ನೀಡುತ್ತಿದ್ದಾರೆಂದು ಆರೋಪಿಸಿದರು. ತುರ್ತು ಪರಿಸ್ಥಿತಿ ಬಗ್ಗೆ ಪ್ರಸ್ತಾವಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಿರುವ ಸೋನಿಯಾ, 1977 ಮಾರ್ಚ್‌ ನಲ್ಲಿ ತುರ್ತುಪರಿಸ್ಥಿತಿ ಕುರಿತು ಈ ದೇಶದ ಜನರು ತಮ್ಮ ಫ‌ಲಿತಾಂಶ ನೀಡಿದ್ದರು. ಅದನ್ನು ಕಾಂಗ್ರೆಸ್‌ ವಿನಮ್ರವಾಗಿಯೇ ಸ್ವೀಕರಿಸಿತ್ತು. ಮೂರೇ ವರ್ಷದಲ್ಲಿ 1977ರಲ್ಲಿ ಸೋತ ಕಾಂಗ್ರೆಸ್‌ ಮತ್ತೆ ಮೋದಿ ಎಂದೂ ಸಾಧಿಸಲಾಗದ ಗೆಲುವಿನೊಂದಿಗೆ ಅಧಿಕಾರ ಬಂತು. ಇದು ಕೂಡ ಇತಿಹಾಸದ ಸತ್ಯ. ಸಂವಿಧಾನದ ಮೇಲಾಗುತ್ತಿರುವ ದಾಳಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಈಗ ತುರ್ತು ಪರಿಸ್ಥಿತಿ ವಿಚಾರ ಎತ್ತಲಾಗುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಮಣಿಪುರ ಹಿಂಸಾಚಾರ, ಉಪಸಭಾಧ್ಯಕ್ಷ ಆಯ್ಕೆ ಕುರಿತಂತೆ ಆಡಳಿತದ ಪಕ್ಷದ ವಿರುದ್ಧ ಸೋನಿಯಾ ಟೀಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next