Advertisement

ಭ್ರಷ್ಟಾಚಾರ ಆರೋಪ-ಮೋದಿ ಸರಕಾರದ ದಿಟ್ಟ ಕ್ರಮ; 22 ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

09:49 AM Aug 27, 2019 | Team Udayavani |

ನವದೆಹಲಿ:ಭ್ರಷ್ಟಾಚಾರದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತೊಮ್ಮೆ ಕಠಿಣ ನಿರ್ಧಾರ ಕೈಗೊಂಡಿದ್ದು, ಸಿಬಿಐಸಿ(ದ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಸ್ ಅಂಡ್ ಕಸ್ಟಮ್ಸ್)ನ 22 ಮಂದಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೊಳಿಸಿದೆ ಎಂದು ವರದಿ ತಿಳಿಸಿದೆ.

Advertisement

ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀ ಮಂಡಳಿ (ಸಿಬಿಐಸಿ) ಯ 22 ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ನೆಲೆಯಲ್ಲಿ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

ಸೂಪರಿಟೆಂಡೆಂಟ್ ಶ್ರೇಣಿಯ ಅಧಿಕಾರಿಗಳಾದ ಕೆಸಿ ಮಂಡಲ್, ಎಂಎಸ್ ಡಾಮೋರ್, ಆರ್ ಎಸ್ ಗೋಗಿಯಾ, ಕಿಶೋರ್ ಪಟೇಲ್, ಜೆಸಿ ಸೋಲಂಕಿ, ಎಸ್ ಕೆ ಮಂಡಲ್, ಗೋವಿಂದ್ ರಾಮ್ ಮಾಳವೀಯ, ಎಯು ಛಾಪಾರ್ ಗಾರೆ, ಎಸ್ ಅಶೋಕ್ ರಾಜ್, ದೀಪಕ್ ಗಾನೇಯನ್, ಪ್ರಮೋದ್ ಕುಮಾರ್, ಮುಕೇಶ್ ಜೈನ್, ನವನೀತ್ ಗೋಯಲ್, ಅಚಿಂತ್ಯ ಕುಮಾರ್, ವಿಕೆ ಸಿಂಗ್, ಡಾ.ಚತುರ್ವೇದಿ, ಡಿ.ಅಶೋಕ್, ಲೀಲಾ ಮೋಹನ್ ಸಿಂಗ್ ಮತ್ತು ವಿಪಿ ಸಿಂಗ್ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next