Advertisement

ಕ್ಷಮಾದಾನ ಯೋಜನೆ: ಕಪ್ಪುಹಣ ಠೇವಣಿಗೆ ಮೋದಿ ಸರಕಾರದಿಂದ Last Chance

08:11 PM Feb 07, 2017 | Team Udayavani |

ಹೊಸದಿಲ್ಲಿ : ನೂತನ ಕಪ್ಪುಹಣ ಕ್ಷಮಾದಾನ ಯೋಜನೆಯಾಗಿರುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ (ಪಿಎಂಜಿಕೆವೈ) ಮಾರ್ಚ್‌ 31ರೊಳಗೆ ಕಪ್ಪುಹಣ ಹೊಂದಿರುವವರು ತಾವು ಘೋಷಿಸುವ ಕಪ್ಪುಹಣದ ಶೇ.25ರಷ್ಟು ಪಾಲನ್ನು ನಾಲ್ಕು ವರ್ಷಗಳ ಅವಧಿಗೆ ಈ ನಿಧಿಯಲ್ಲಿ ಜಮೆ ಮಾಡುವುದಕ್ಕೆ ಕೊನೇ ಅವಕಾಶ ನೀಡಲಾಗಿದೆ.

Advertisement

ಕಪ್ಪುಹಣ ಹೊಂದಿರುವವರಿಗೆ ನೀಡಲಾಗಿರುವ ಈ ಕೊನೆ ಕ್ಷಮಾದಾನದ ಅವಕಾಶದಡಿ ಕಪ್ಪುಹಣ ಹೊಂದಿರುವವರು ತಾವು ನೋಟು ಅಪನಗದೀಕರಣದ ಬಳಿಕ ಬ್ಯಾಂಕಿನಲ್ಲಿ ಜಮೆ ಮಾಡಿರುವ ನಿಷೇಧಿತ ನೋಟುಗಳ ಪ್ರಮಾಣದ ಶೇ.50ರ ಮೊತ್ತವನ್ನು ತೆರಿಗೆಯಾಗಿ ಪಾವತಿಸುವ ಮೂಲಕ ಶುದ್ಧ ಹಸ್ತರಾಗಿ ಬರುವಂತೆ ಸರಕಾರ ಕೇಳಿಕೊಂಡಿದೆ.

ಪ್ರಧಾನ್‌ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಪ್ಪುಹಣ ಘೋಷಿಸಿಕೊಳ್ಳುವವರು ತಮ್ಮಲ್ಲಿನ ಕಪ್ಪುಹಣದ ನಾಲ್ಕನೇ ಒಂದಂಶವನ್ನು ಪಿಎಂಜಿಕೆಡಿಎಸ್‌ ಯೋಜನೆಯಡಿ ಯಾವುದೇ ಬಡ್ಡಿ ಇಲ್ಲದೆ ಜಮೆ ಮಾಡಬೇಕಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next