Advertisement

ಅಣಕು ಪಕ್ಷವಾಗಲಿದೆ ಜೆಡಿಎಸ್‌: ಅಶೋಕ

11:23 PM Jan 22, 2020 | Lakshmi GovindaRaj |

ಕುಮಟಾ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಪೊಲೀಸರ ಅಣಕು ಪ್ರದರ್ಶನ ಎಂದು ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಯಾಗಿ ಕಾರ್ಯನಿರ್ವಹಿಸಿದವರು ಇಂತಹ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ.

Advertisement

ಅವರ ಈ ಒಂದು ಮಾತಿನಿಂದ ಮುಂದೊಂದು ದಿನ ಜೆಡಿಎಸ್‌ ಪಕ್ಷವನ್ನು ಜನರು ಅಣಕು ಪಕ್ಷವೆಂದು ತೀರ್ಮಾನಿಸುತ್ತಾರೆ ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್‌.ಅಶೋಕ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆ ನೀಡಿರುವುದು ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ. ಬಾಂಬ್‌ ಇಡುವ ಕೃತ್ಯ ಯಾರೇ ಮಾಡಿರಲಿ ಅವರು ಭಯೋತ್ಪಾದಕರೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next