Advertisement

ಶ್ರೀನಗರ, ಬಡ್ಗಾಂವ್‌ನಲ್ಲಿ ಮೊಬೈಲ್‌ ಇಂಟರ್‌ನಟ್‌ ಸೇವೆ ಅಮಾನತು

12:09 PM Jun 02, 2018 | udayavani editorial |

ಶ್ರೀನಗರ : ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ನಡುವಿನ ಸಂಘರ್ಷದ ವೇಳೆ ಭದ್ರತಾ ಪಡೆಗಳ ವಾಹನ ಢಿಕ್ಕಿಯಾಗಿ ಯುವಕನೋರ್ವ ಇಂದು ಮೃತಪಟ್ಟ ಕಾರಣಕ್ಕೆ ಭುಗಿಲೆದ್ದಿರುವ ಹಿಂಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷಿಣ ಕಾಶ್ಮೀರದ ಶ್ರೀನಗರ ಮತ್ತು ಬಡ್ಗಾಂವ್‌ ಜಿಲ್ಲೆಗಳಲ್ಲಿ ಇಂಟರ್‌ ನೆಟ್‌ ಸೇವೆಗಳನ್ನು ಅಮಾನತು ಮಾಡಿದ್ದಾರೆ.

Advertisement

ಅನಂತನಾಗ್‌, ಕುಲಗಾಂವ್‌, ಪುಲ್ವಾಮಾ ಮತ್ತು ಶೋಪಿಯಾನ್‌ ಜಿಲ್ಲೆಗಳಲ್ಲಿ ಹೈ ಸ್ಪೀಡ್‌ ಮೊಬೈಲ್‌ ಡಾಟಾ ಸೇವೆಗಳನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಭದ್ರತಾ ಪಡೆಗಳಿಂದ ಈಚೆಗೆ ನಡೆದಿರುವ ಪೌರರ ಹತ್ಯೆಗಳನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next