Advertisement

ಎಂಎಂಸಿಎಚ್ ಗೆ ರೈಲ್ವೆ ಮ್ಯಾನೇಜರ್ ಹಾಡು

02:22 PM Mar 01, 2018 | Sharanya Alva |

ಮುಸ್ಸಂಜೆ ಮಹೇಶ್‌ ನಿರ್ದೇಶನದ “ಎಂಎಂಸಿಎಚ್‌’ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಚಿತ್ರರಂಗದ ನಾಲ್ವರು ಹಿರಿಯ ಕಲಾವಿದೆಯರ ಪುತ್ರಿಯರು ನಟಿಸುತ್ತಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿ, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಜನರಲ್‌ ಮ್ಯಾನೇಜರ್‌ ಆಗಿರುವ ದಯಾನಂದ್‌ ಅವರು ಹಾಡೊಂದಕ್ಕೆ ದನಿ ನೀಡಿದ್ದಾರೆ.

Advertisement

ಗೀತರಚನೆಕಾರ ಗೌಸ್‌ಪೀರ್‌ ಬರೆದ “ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ…’ ಎಂಬ ಹಾಡಿಗೆ ರಾಜಾಜಿನಗರದಲ್ಲಿರುವ ಆದರ್ಶ ಸ್ಟುಡಿಯೋದಲ್ಲಿ ದಯಾನಂದ್‌ ಅವರು ಹಾಡಿದ್ದಾರೆ. ಈ ಹಿಂದೆ ಹಲವು ಭಾವಗೀತೆ ಮತ್ತು ಭಕ್ತಿಗೀತೆಗಳನ್ನು ಹಾಡಿದ್ದ ದಯಾನಂದ್‌ ಅವರು ಇದೇ ಮೊದಲ ಸಲ ಚಿತ್ರಕ್ಕೆ ಹಾಡಿದ್ದಾರೆ.

ಚಿತ್ರಕ್ಕೆ ಶ್ರೀಧರ್‌ ವಿ.ಸಂಭ್ರಮ್‌ ಸಂಗೀತ ನೀಡಿದ್ದಾರೆ. ಈ ಚಿತ್ರವನ್ನು ಎಸ್‌. ಪುರುಷೋತ್ತಮ ಜಾನಕಿರಾಮ ಹಾಗೂ ಅರವಿಂದ್‌ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ರಜನಿಕಾಂತ್‌ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಕನ್ನಡ ಚಿತ್ರರಂಗದ ನಾಲ್ವರು ಹಿರಿಯ ಕಲಾವಿದೆಯರ
ಪುತ್ರಿಯರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಮೇಘನಾರಾಜ್ ಪ್ರಥಮಾ ಪ್ರಸಾದ್‌, ಸಂಯುಕ್ತಾ ಹೊರನಾಡು ಹಾಗೂ ನಕ್ಷತ್ರ ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next