Advertisement

ಮೇಲ್ಮನೆ ಚುನಾವಣೆ: ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ

02:42 PM Dec 06, 2021 | Team Udayavani |

ರಾಮನಗರ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆ ವೇಳೆ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಕರ್ತವ್ಯ ನಿರ್ವಹಿಸುವಂತೆ ಚುನಾವಣಾ ವೀಕ್ಷಕಅಧಿಕಾರಿ ಶಿವಯೋಗಿ ಸಿ ಕಳಸದ್‌ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಡಿ.10ರಂದು ನಡೆಯುವ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಸಿದ್ಧತೆಗಳ ಪರಿಶೀಲನೆಗೆಂದು ಭಾನುವಾರ ನಗರದ ಜಿಪಂ ಸಭಾಂಗಣದಲ್ಲಿನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದಅವರು,ವಿಧಾನ ಪರಿಷತ್‌ ಚುನಾವಣೆಗೆ ಕಡಿಮೆ ಮತದಾರರು, ಕಡಿಮೆ ಮತಗಟ್ಟೆಗಳಿವೆ ಎಂದು ಮೈ ಮರೆಯಬೇಡಿ. ಚುನಾವನಾ ಕರ್ತವ್ಯಕ್ಕೆ ನಿಯೋಜಿಸಿರುವ ಪ್ರತಿಯೊಬ್ಬರು ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.

ಚುನಾವಣೆಗೆ ಪ್ರಕ್ರಿಯೆ: ಮತದಾನವು ಡಿ.10ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಮತದಾನ ನಡೆಯುವ ಕೊಠಡಿಯಲ್ಲಿ ಮತದಾನದಗೌಪ್ಯತೆ ಕಾಪಾಡುವ ರೀತಿ ಎಚ್ಚರಿಕೆ ವಹಿಸಬೇಕು.ಬೆಳಗ್ಗೆಯಿಂದ ಸಂಜೆವರೆಗೆ ವೀಡಿಯೋ ಚಿತ್ರೀಕರಣನಡೆಸಿ. ಇದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಚುನಾವಣೆ ನೀತಿ ಪಾಲನೆ: ಮತದಾನ ಮಾಡುವ ಸಂದರ್ಭದಲ್ಲಿ ಮತದಾನದ ಕೊಠಡಿಗೆ ಮತದಾರರು ಮೊಬೈಲ್‌ ತೆಗೆದುಕೊಂಡುಹೋಗುವುದನ್ನು ನಿಷೇಧಿಸಲಾಗಿದೆ. ಕೊಠಡಿಯ ಹೊರಗೆ ಮೊಬೈಲ್‌ ಇಡುವ ವ್ಯವಸ್ಥೆ ಮಾಡಿ. ಮತದಾನವು ಗ್ರಾಪಂ ಕಚೇರಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಕಚೇರಿಗಳಲ್ಲಿ ನಡೆಸಬೇಕು. ಹೀಗಾಗಿ ಈ ಕೇಂದ್ರಗಳಲ್ಲಿ ಡಿ.10ರಂದು ಮತದಾನದ ಕೆಲಸದ ಹೊರತುಕಚೇರಿ ಕೆಲಸಗಳು ನಡೆಯದಂತೆ ಎಚ್ಚರಿಕೆ ವಹಿಸಿ ಸೂಚನೆ ಕೊಟ್ಟರು. ಸಿದ್ಧತೆ ಬಗ್ಗೆ ಪರಿಶೀಲನೆ: ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೆಲಸಗಳು ತಾಲೂಕು ಕೇಂದ್ರದಲ್ಲಿನಡೆಸಿ. ಮತಗಟ್ಟೆಗಳ ರೂಟ್‌ ಮ್ಯಾಪ್‌ ಮಾಡಿಕೊಂಡುಬೇಕಿರುವ ವಾಹನದ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಎಂದರು.

ಇದೇ ವೇಳೆ ಅವರು ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿ ಸಂಖ್ಯೆ, ಅವರು ಪಡೆದಿರುವ ತರಬೇತಿ ಕುರಿತು ಮಾಹಿತಿ ಪಡೆದರು.

Advertisement

ಜಿಲ್ಲೆಯಲ್ಲಿ 2062 ಮತದಾರರು: ಜಿಲ್ಲಾಧಿಕಾರಿ ಡಾ: ರಾಕೇಶ್‌ ಕುಮಾರ್‌ ಕೆ ಅವರು ಮಾತನಾಡಿ ಜಿಲ್ಲೆಯಲ್ಲಿ 973 ಪುರುಷರು ಹಾಗೂ 1089 ಮಹಿಳೆಯರು ಸೇರಿ ಒಟ್ಟು 2062 ಮತದಾರರಿದ್ದಾರೆ. 122 ಗ್ರಾಪಂ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 126 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ 24 ಮತಗಟ್ಟೆ ಗಳನ್ನು ಅತಿ ಸೂಕ್ಷ್ಮ ಹಾಗೂ 49 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದರು.

ನೋಡಲ್‌ ಅಧಿಕಾರಿಗಳ ನೇಮಕ: ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೇಂದ್ರಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 145 ಪಿಆರ್‌ಒಗಳು, 145ಎಪಿಆ ರ್‌ಒ, 145 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ. ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಪ್ರತಿತಾಲೂಕಿಗೆ ಎರಡು ತಂಡ ರಚಿಸಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವೀಕ್ಷಕರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒಇಕ್ರಮ್‌, ಎಸ್ಪಿ ಎಸ್‌.ಗಿರೀಶ್‌, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಪಂ ಉಪಕಾರ್ಯದರ್ಶಿ ರಮೇಶ್‌, ತಹಶೀಲ್ದಾರರು ಗಳಾದ ವಿಜಯ್‌ ಕುಮಾರ್‌, ವಿಶ್ವನಾಥ್‌, ಶ್ರೀನಿವಾಸ್‌ ಪ್ರಸಾದ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next