Advertisement

MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು

12:11 PM Jun 07, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.

Advertisement

ಕ್ಷೇತ್ರದ ಹಾಲಿ ಸದಸ್ಯ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ ಪುನರಾಯ್ಕೆಯಾದರು.

ಪ್ರಥಮ ಪ್ರಾಶಸ್ತ್ಯದ ಮತದ ನಂತರ ನಿಗದಿಪಡಿಸಲಾದ ಕೋಟಾ 48,260 ಮತಗಳು ಎರಡನೇ ಪ್ರಾಶಸ್ತ್ಯದ ಮತ ಗುರಿ ತಲುಪಿದ ಹಿನ್ನೆಲೆಯಲ್ಲಿ ಚಂದ್ರಶೇಖರ ಪಾಟೀಲ ಪುನರಾಯ್ಕೆಯಾದರು.

ಸೋಲಿನ ಛಾಯೆ ಕಾಣುತ್ತಿದ್ದಂತೆ ಮತ ಏಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಹೊರ ನಡೆದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಣ ಬಲದಿಂದ ಗೆದ್ದಿದೆ. ಆದರೆ ಪದವೀಧರ ಹಾಗೂ ಶಿಕ್ಷಕರ ಪರದ ಹೋರಾಟ ಮುಂದುವರೆಯುತ್ತದೆ ಎಂದು ಸೋಲಿನ ಬಳಿಕ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ತಿಳಿಸಿದರು.

Advertisement

ಗೆಲುವಿನ ಹಿಂದೆ ಮಟ್ಟೂರ: ಪ್ರಸ್ತುತ ಕಾಂಗ್ರೆಸ್ ಪುನಾರಾಯ್ಕೆಯಾಗುವಲ್ಲಿ ಆರು ತಿಂಗಳ ಹಿಂದೆಯೇ ಅಭ್ಯರ್ಥಿಯನ್ನು ಘೋಷಿಸಿದ್ದು, ಕ್ಷೇತ್ರದಾದ್ಯಂತ ಪ್ರಚಾರ ಮಾಡಲು ಸಮಯ ಸಿಕ್ಕಿತ್ತಲ್ಲದೇ ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಸತತ ಜತೆಗೂಡಿ ವ್ಯಾಪಕ ಪ್ರಚಾರ ಕೈಗೊಂಡಿರುವುದು ಕಾಂಗ್ರೆಸ್ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

12 ಸಾವಿರ ಮತಗಳು ತಿರಸ್ಕೃತ: ಚಲಾವಣೆಯಾದ ಒಟ್ಟಾರೆ 1.09 ಲಕ್ಷ ಮತಗಳಲ್ಲಿ 12,513 ಮತಗಳು ತಿರಸ್ಕೃತಗೊಂಡಿವೆ. ಪದವೀಧರ, ಸರ್ಕಾರಿ ನೌಕರರು-ಅಧಿಕಾರಿಗಳೇ ಇರುವ ಮತದಾರರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮತ ತಿರಸ್ಕೃತಗೊಂಡಿರುವುದು ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next