Advertisement

ಶಾಸಕ ತನ್ವೀರ್‌ ಸೇಠ್ ಆಪ್ತನ ಮೇಲೆ ಹಲ್ಲೆ

10:55 PM Mar 06, 2020 | Lakshmi GovindaRaj |

ಮೈಸೂರು: ಶಾಸಕ ತನ್ವೀರ್‌ ಸೇಠ್ ಮೇಲಿನ ಹತ್ಯೆ ಯತ್ನ ಮಾಸುವ ಮುನ್ನವೇ ಗುರುವಾರ ರಾತ್ರಿ ತನ್ವೀರ್‌ ಸೇಠ್ ಆಪ್ತನ ಮೇಲೂ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯರಗನಹಳ್ಳಿ ನಿವಾಸಿ, ಕಾಂಗ್ರೆಸ್‌ ಮುಖಂಡ ಅಣ್ಣಯ್ಯ ಹಲ್ಲೆಗೆ ಒಳಗಾದವರು.

Advertisement

ಯರಗನಹಳ್ಳಿಯಲ್ಲಿ ಮಾ.10ರಂದು ನಡೆಯಲಿರುವ ಮಾರಿಹಬ್ಬಕ್ಕೆ ಗುರುವಾರ ರಾತ್ರಿ ರಂಗ ಕುಣಿತದ ಅಭ್ಯಾಸ ನಡೆಯುತ್ತಿತ್ತು. ಈ ವೇಳೆ, ಕುಣಿತ ನಿಲ್ಲಿಸುವ ವಿಚಾರಕ್ಕೆ ಅಣ್ಣಯ್ಯ ಅವರ ಸಹೋದರ ರಘು ಮತ್ತು ಅದೇ ಗ್ರಾಮದ ಸೋದರರಾದ ಮಹದೇವ, ಚಿದಂಬರ ಅವರ ನಡುವೆ ಗಲಾಟೆ ಆಯಿತು. ಈ ವೇಳೆ, ಮಧ್ಯ ಪ್ರವೇಶಿಸಿದ ಅಣ್ಣಯ್ಯ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next