Advertisement

ನಮ್ಮ ನಾಯಕರು ನಿಮ್ಮಿಂದ ಬುದ್ದಿ ಹೇಳಿಸಿಕೊಳ್ಳಬೇಕಿಲ್ಲ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಕಿಡಿ

03:28 PM Jan 06, 2022 | Team Udayavani |

ಬೆಂಗಳೂರು: ಸಿದ್ದರಾಮಯ್ಯನವರು ರಾಷ್ಟ್ರ ಹಾಗೂ ರಾಜ್ಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಗಾಂಧಿ ಮನೆತನವನ್ನು, ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನು ಹೊಗಳುವುದಷ್ಟೇ ತಿಳಿದುಕೊಂಡಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಅವರಿಗೆ ಬುದ್ದಿ ಇಲ್ಲ ಅಂದಿದ್ದಾರೆ. ಆದರೆ ಇವರ ಬಳಿ ಇರುವುದು ಯಾವ ಬುದ್ದಿ? ಒಳ್ಳೆಯ ಬುದ್ದಿ ಕೆಟ್ಟ ಬುದ್ದಿ ಎರಡಿರುತ್ತದೆ. ಸಿದ್ಧರಾಮಯ್ಯ ಹತ್ತಿರ ಯಾವ ಬುದ್ದಿ ಇದೆ? ಬಿಜೆಪಿಯವರಿಗೆ ಬುದ್ದಿ ಹೇಳೊ ಅವಶ್ಯಕತೆ ಇಲ್ಲ. ನಿಮ್ಮ ಪಕ್ಷದ ಅಧ್ಯಕ್ಷರಿಗೆ ಬುದ್ದಿ ಹೇಳಿ ಎಂದು ಕುಟುಕಿದರು.

ಇದನ್ನೂ ಓದಿ:ಪ್ರಧಾನಿ ಮೋದಿ ಪಂಜಾಬ್ ಭೇಟಿ: ಭದ್ರತಾ ಲೋಪದ ಬಗ್ಗೆ ವರದಿ ಕೇಳಿದ ಗೃಹ ಇಲಾಖೆ

ಒಮಿಕ್ರಾನ್ ಸಮಯದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೆ ಬುದ್ದಿ ಹೇಳಿ. ನಮ್ಮ ನಾಯಕರು ನಿಮ್ಮಿಂದ ಬುದ್ದಿ ಹೇಳಿಸಿಕೊಳ್ಳಬೇಕಿಲ್ಲ. ನಿಮ್ಮಿಂದ ಕಲಿಯಬೇಕಾದ ಬುದ್ದಿ ಇಲ್ಲ. ದುರ್ಬುದ್ದಿ ನಿಮ್ಮಿಂದ ದೂರವಾಗಲಿ. ನಿಮಗೆ ಒಳ್ಳೆಯ ಸುಬುದ್ದಿ ಬರಲಿ ಹಾರೈಸುತ್ತೇನೆ ಎಂದು ರಾಜೀವ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next