Advertisement

ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣ: ಬಿ.ಎಲ್‌.ಸಂತೋಷ್‌ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿ

09:43 PM Nov 22, 2022 | Team Udayavani |

ಹೈದರಾಬಾದ್‌: ಟಿಆರ್‌ಎಸ್‌ ಶಾಸಕರ ಖರೀದಿಗೆ ಹಣದ ಆಮಿಷ ಒಡ್ಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಲುಕೌಟ್‌ ನೋಟಿಸ್‌ ಹೊರಡಿಸಿದೆ.

Advertisement

ಅವರ ಜತೆಗೆ ಆಲಪ್ಪುಳದ ವೈದ್ಯ, ಭಾರತಿ ಧರ್ಮ ಜನಸೇನಾ ಅಧ್ಯಕ್ಷ ತುಷಾರ್‌ ವೆಲ್ಲಪ್ಪಲ್ಲಿ, ಕೊಚ್ಚಿಯ ಜಗ್ಗು ಕೊಟ್ಟಿಲಿಲ್‌, ಕರೀಂನಗರದ ಡಿ.ಶ್ರೀನಿವಾಸ್‌ ಎಂಬುವರ ವಿರುದ್ಧವೂ ನೋಟಿಸ್‌ ಹೊರಡಿಸಲಾಗಿದೆ.

ಆದರೆ, ಡಿ.ಶ್ರೀನಿವಾಸ್‌ ಅವರು ಸೋಮವಾರ ತನಿಖಾ ತಂಡ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಸಂತೋಷ್‌ ಮತ್ತು ಇತರ ಮೂವರು ಹಾಜರಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next