Advertisement

ಕಾಲುವೆಗೆ ಶಾಸಕ ಮುದ್ನಾಳ ಭೇಟಿ-ಪರಿಶೀಲನೆ

06:23 PM Feb 17, 2021 | Team Udayavani |

ಯಾದಗಿರಿ: ಮತಕ್ಷೇತ್ರದ ಹಬ್ಬಳ್ಳಿ ಗ್ರಾಮದ ಡಿಸ್ಟ್ರಿಬ್ಯೂಟರ್‌ 12 ಎ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹೂಳು ತುಂಬಿ ಕೊನೆ ಅಂಚಿನ ರೈತರ ಜಮೀನುಗಳಿಗೆ ನೀರು ಬರದಿರುವುದು ವೀಕ್ಷಿಸಿದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಕೂಡಲೇ ದುರಸ್ತಿ ಮಾಡಿಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕೆಂದು ಕೆಬಿಜೆಎನೆಎಲ್‌ ಅ ಧಿಕಾರಿಗಳಿಗೆ ಸೂಚಿಸಿದರು.

Advertisement

ಈಗಾಗಲೇ 16 ಕಿ.ಮೀ.ಗಳಲ್ಲಿ 11 ಕಿ.ಮೀ. ಕಾಮಗಾರಿ ಮುಗಿದಿದ್ದು, 5.8 ಕಾಮಗಾರಿಗೆ ರಿಪೇರಿ ಮಾಡಬೇಕಾಗಿದೆ. ಉಳಿದ ಕಾಮಗಾರಿಗೆ ತಗಲುವ ವೆಚ್ಚ 6 ಕೋಟಿ ಆಗುತ್ತಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸೂಪರಡೆಂಟ್‌ ಆಫ್‌ ಇಂಜಿನಿಯರ್‌ ಎನ್‌.ಡಿ ಪವಾರ ಶಾಸಕರಿಗೆ ಮಾಹಿತಿ ನೀಡಿದರು.

ಈ ಕಾಲುವೆ ದುರಸ್ತಿಯಾದರೆ ಬಿದರಾಣಿ, ಹುರುಸುಗುಂಡಗಿ, ಹಬ್ಬಳ್ಳಿ, ಇಬ್ರಾಹಿಂಪೂರ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. ಹಾಗಾಗಿ ಕೂಡಲೇ
ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಖಾನಾಪುರ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಹಾಗೂ ಪ್ರಮೋದ ಗೌಳಿ ಅವರಿಗೆ ಶಾಸಕರು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ರೈತರಾದ ಸಿದ್ದಲಿಂಗಪ್ಪಗೌಡ ಹಬ್ಬಳ್ಳಿ, ಸಿದ್ದಣ್ಣಗೌಡ ಹುರಸುಗುಂಡಗಿ, ಶರಣಗೌಡ ತಂಗಡಗಿ, ವಸಂತಕುಮಾರ ಇಬ್ರಾಹಿಂಪೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next