Advertisement

ಕನ್ನಡಿಗರು ಹೊರಗಿನವರು ಎಂದ ಪರಬ್ ವಿರುದ್ಧ ಗೋವಾ ಶಾಸಕ ಕೃಷ್ಣಾ ಸಾಳಕರ್ ಕಿಡಿ

05:19 PM Jun 01, 2022 | Team Udayavani |

ಪಣಜಿ: ಕೆಲವು ರಾಜಕೀಯ ನಾಯಕರು ಗೋವಾದಲ್ಲಿ ವಾಸಿಸುತ್ತಿರುವ ಕನ್ನಡಿಗರನ್ನು “ಇವರು ಹೊರಗಿನವರು” (ಗಾಟಿ, ಬಾಯಲೊ) ಎಂಬ ಶಬ್ದ ಬಳಸಿ ಬೇಧಭಾವ ಮಾಡಿ ಜನರಲ್ಲಿ ದ್ವೇಷ ನಿರ್ಮಾಣ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಗೋವಾದಲ್ಲಿ ಕನ್ನಡಿಗರು ಮಾತ್ರವಲ್ಲದೆಯೇ ವಿವಿಧ ರಾಜ್ಯಗಳ ಜನರು ಕಳೆದ ಅನೇಕ ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂದು ವಾಸ್ಕೊ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣಾ ಸಾಳಕರ್ ಹೇಳಿದರು.

Advertisement

ವಾಸ್ಕೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮನೋಜ್ ಪರಬ್ ರವರಂತಹ ರಾಜಕಾರಣಿಗಳು ಇಂತಹ ದ್ವೇಷದ ರಾಜಕಾರಣ ಮಾಡಬಾರದು. ಭಾರತದ ಸಂವಿಧಾನವನ್ನು ಗೌರವಿಸದವರಲ್ಲಿ ಪರಬ್ ಕೂಡ ಒಬ್ಬರು. ಇಂತಹ ತಾರತಮ್ಯದಿಂದ ಭವಿಷ್ಯದಲ್ಲಿ ರಾಜ್ಯದ ಜನತೆಗೆ ತೊಂದರೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ತಾಣದಲ್ಲಿ ಶಾಸಕ ಕೃಷ್ಣಾ ಸಾಳಕರ್ ರವರ ವಿರುದ್ಧ ರೆವೊಲ್ಯೂಷನರಿ ಗೋವನ್ಸ್ ಪಕ್ಷದ ಪ್ರಮುಖ ಮನೋಜ್ ಪರಬ್ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಕೃಷ್ಣಾ ಸಾಳಕರ್, ಒಂದು ಪಕ್ಷದ ನಾಯಕ ಇಷ್ಟು ಕೀಳು ಮಟ್ಟಕ್ಕೆ ಹೋಗಿ ತನ್ನ ಸಾಮರ್ಥ್ಯ ವನ್ನು ಸಾಬೀತುಪಡಿಸಿದ್ದಾರೆ. ಪರಬ್ ರವರಂತಹ ನಾಯಕರು ಗೋವಾದಲ್ಲಿರುವ ಹೊರ ರಾಜ್ಯಗಳ ಜನರ ವಿರುದ್ಧ ಇಂತಹ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಬೇಕು. ಪರಬ್ ರವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಲ್ಲಿ ಕನ್ನಡದ ಜತೆಗೆ ಬೇರೆ ರಾಜ್ಯಗಳ ಜನರೂ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರಕ್ಕಾಗಿ ಹಲವು ವರ್ಷಗಳಿಂದ ಗೋವಾದಲ್ಲಿ ನೆಲೆಸಿದ್ದಾರೆ. ಎಂದರು.

Advertisement

Udayavani is now on Telegram. Click here to join our channel and stay updated with the latest news.

Next