Advertisement

Mangaluru ಶಾಸಕರಿಗೆ ಕಾರು ಢಿಕ್ಕಿ; ಆರೋಪಿಗೆ ಹಲ್ಲೆ ನಡೆದಿಲ್ಲ: ಡಿಸಿಪಿ

11:40 PM Jan 15, 2024 | Team Udayavani |

ಮಂಗಳೂರು: ಶಾಸಕ ರಾಜೇಶ್‌ ನಾೖಕ್‌ ಅವರಿಗೆ ಕಾರು ಢಿಕ್ಕಿ ಹೊಡೆಸಿದ ಆರೋಪಿಯ ಮೇಲೆ ಗುರುಪುರದಲ್ಲಿ ಒಂದು ಗುಂಪಿನಿಂದ ಹಲ್ಲೆ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆದರೆ ಈ ಬಗ್ಗೆ ಆರೋಪಿಯಾಗಿರುವ ಮೊಹಮ್ಮದ್‌ ಸುಫೇಲ್‌ ಅವರು ಯಾವುದೇ ದೂರು ನೀಡಿಲ್ಲ. ಹೇಳಿಕೆ ಪಡೆಯುವಾಗಲೂ ತನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿರುವುದಾಗಿ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ಧಾಥ್‌ ಗೋಯಲ್‌ ತಿಳಿಸಿದ್ದಾರೆ.

Advertisement

ಜ. 14ರಂದು ಶಾಸಕರಿಗೆ ಕಾರು ಢಿಕ್ಕಿಯಾಗಿದ್ದು, ಈ ಸಂಬಂಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಮೊಹಮ್ಮದ್‌ ಸುಫೇಲ್‌ ಅವರು ಮೂಡಬಿದಿರೆಯಿಂದ ಮಂಗಳೂರು ಕಡೆಗೆ ಕಾರು ಚಲಾಯಿಸಿಕೊಂಡು ಬರುವಾಗ ಶಾಸಕರಿಗೆ ಢಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಅಲ್ಲಿ ನಿಲ್ಲಿಸದೆ ಪರಾರಿಯಾದ ಅವರನ್ನು ಗುರುಪುರ ವೃತ್ತದಲ್ಲಿ ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದು ಬಜಪೆ ಠಾಣೆಗೆ ಕರೆತಂದು ಕಾನೂನು ಕ್ರಮ ಕೈಗೊಂಡು ಅವರ ಹೇಳಿಕೆ ಪಡೆದು ಠಾಣೆಯಿಂದ ಕಳುಹಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಿದೆ ಎಂದು ಡಿಸಿಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next