Advertisement

ಶಾಸಕ ಹರೀಶ್ ಪೂಂಜ ಬೆದರಿಕೆ ಪ್ರಕರಣ; ಬಂಟ್ವಾಳದಲ್ಲಿ ಸಿಐಡಿ ತನಿಖೆ ಆರಂಭ

08:36 AM Oct 20, 2022 | Team Udayavani |

ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆಯೊಡ್ಡಿದ ಪ್ರಕರಣವನ್ನು ರಾಜ್ಯ ಸರಕಾರ ‌ಸಿಐಡಿಗೆ ಹಸ್ತಾಂತರಿಸಿದ್ದು, ಸಿಐಡಿ ಇನ್ಸ್‌ಪೆಕ್ಟರ್ ಶಿವರಾಜ್ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಆಗಮಿಸಿ ಕಡತಗಳ ಪರಿಶೀಲನೆಯ ಮೂಲಕ ತನಿಖೆ ಆರಂಭಿಸಿದ್ದಾರೆ.

Advertisement

ಅ. 18 ರಂದು ಬಂಟ್ವಾಳ ಗ್ರಾಮಾಂತರ ಪಿಎಸ್ಐ ಹರೀಶ್ ಅವರು ಪ್ರಕರಣ ಕಡತವನ್ನು ಬೆಂಗಳೂರು ಸಿಐಡಿ ಕಚೇರಿಗೆ ಹಸ್ತಾಂತರಿಸಿದ್ದರು. ಕಡತ ಹಸ್ತಾಂತರದ ಬೆನ್ನಲ್ಲೇ ಪೊಲೀಸ್ ಇನ್ಸ್‌ಪೆಕ್ಟರ್, ಪಿಎಸ್ಐ ಹಾಗೂ ಇಬ್ಬರು ಸಿಬಂದಿಯನ್ನು ಒಳಗೊಂಡ ತಂಡ ಬಂಟ್ವಾಳಕ್ಕೆ ಆಗಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next