Advertisement

ಲೋಕಸಭಾ ಚುನಾವಣೆ ಬಂತೆಂದು ನನ್ನ ವಿರುದ್ಧ ಷಡ್ಯಂತ್ರ : ಎಂ.ಜೆ. ಅಕ್ಬರ್

04:47 PM Oct 14, 2018 | |

ಹೊಸದಿಲ್ಲಿ: ಲೋಕಸಭಾ ಚುನಾವಣೆ ಹತ್ತಿರ ಬಂದಿರುವ ಕಾರಣ ನನ್ನ ವಿರುದ್ಧ ಸುಳ್ಳು ಮತ್ತು ಕಪೋಲಕಲ್ಪಿತ ಆರೋಪಗಳನ್ನು ಮಾಡಿಸಲಾಗಿದೆ. ನಾನು ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ ಎಂದು ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ  ಸಚಿವ ಎಂ.ಜೆ.ಅಕ್ಬರ್ ಭಾನುವಾರ ಹೇಳಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲದಕ್ಕೂ ಮಸಾಲೆ ಸೇರಿಸಲಾಗಿದೆ. ಇದನ್ನು ದುರುಪಯೋಗ ಪಡಿಸಿಕೊಳ್ಳಲು ಹಲವರು ಸಿದ್ದರಾಗಿದ್ದಾರೆ ಎಂದರು. 

ನಾನು ಕರ್ತವ್ಯ ನಿಮಿತ್ತವಾಗಿ ವಿದೇಶ ಪ್ರವಾಸದಲ್ಲಿದ್ದೆ ಹೀಗಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಸ್ವದೇಶಕ್ಕೆ ಮರಳಿದ್ದೇನೆ,ನನ್ನ ವಕೀಲರು ಈ ಬಗ್ಗೆ ನೋಡಿಕೊಳ್ಳಲಿದ್ದಾರೆ ಎಂದರು. 

ಲೋಕಸಭಾ ಚುನಾವಣೆ ಹತ್ತಿರ ಬರುವಾಗಲೇ ಯಾಕೆ ಆರೋಪ ಮಾಡಲಾಗಿದೆ? ಹಿಂದೆ ಮಾಡಬಹುದಿತ್ತಲ್ಲ? ಇದ ಹಿಂದಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. 

ಸುಳ್ಳಿಗೆ ಕಾಲುಗಳು ಇಲ್ಲ, ಆದರೆ ಅವುಗಳು ವಿಷವನ್ನು ಹೊಂದಿರುತ್ತವೆ, ಆರೋಪಗಳಿಂದ ತುಂಬಾ ತೊಂದರೆಯಾಗಿದೆ. ನಾನು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next